Webdunia - Bharat's app for daily news and videos

Install App

ಕೊಡಗಿನಲ್ಲಿ ಗುಂಡಿಕ್ಕಿ ಬಸ್ ಚಾಲಕನ ಬರ್ಬರ ಹತ್ಯೆ

Webdunia
ಗುರುವಾರ, 14 ಏಪ್ರಿಲ್ 2016 (13:56 IST)
ಕೊಡಗಿನಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದ್ದು ನಡು ರಸ್ತೆಯಲ್ಲಿಯೇ ಖಾಸಗಿ ಬಸ್ ಚಾಲಕನನ್ನು ಗುಂಡಿಟ್ಟು ಹತ್ಯೆಮಾಡಿರುವ ಘಟನೆ ಮಡಿಕೇರಿ ತಾಲೂಕಿ ಅರವತ್ತೊಕ್ಲು ಗ್ರಾಮದಲ್ಲಿ ನಿನ್ನೆ ರಾತ್ರಿ 7 ಗಂಟೆಗೆ ನಡೆದಿದೆ.
 
ಹತ್ಯೆಯಾದವನನ್ನು ಖಾಸಗಿ ಬಸ್ ಚಾಲಕ ರಾಜು(42) ಎಂದು ಗುರುತಿಸಲಾಗಿದ್ದು ನಿನ್ನೆ ರಾತ್ರಿ ಬಸ್‌ನ್ನು ಮಾಲೀಕರ ಮನೆ ಮುಂದೆ ಬಿಟ್ಟು ತನ್ನ ಮನೆಗೆ ಹೊರಟಿದ್ದಾಗ ಅಪರಿಚಿತರು ಆತನನ್ನು ಗುಂಡಿಟ್ಟು ಹತ್ಯೆಮಾಡಿದ್ದಾರೆ. 
 
ಆ ಸಮಯದಲ್ಲಿ ಬಸ್ ಕ್ಲೀನರ್ ರವಿ ಅಲ್ಲೇ ಸಮೀಪ ಬಸ್ ತೊಳೆಯುತ್ತಿದ್ದ. ಗುಂಡಿನ ಸದ್ದು ಕೇಳಿ ಆತ ಓಡಿ ಬಂದಾಗ ಚಾಲಕ ರಾಜು ರಕ್ತದ ಮಡುವಿನಲ್ಲಿ ಒದ್ದಾಡುತ್ತಿರುವುದು ಕಂಡು ಬಂದಿದೆ. ಕೂಡಲೇ ಆತ ಮಡಿಕೇರಿ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
 
ಪ್ರತ್ಯಕ್ಷದರ್ಶಿ ರವಿ ನೀಡಿರುವ ಮಾಹಿತಿಯ ಪ್ರಕಾರ ಗಿರೀಶ್ ಎಂಬ ವ್ಯಕ್ತಿ ಗುಂಡಿನದಾಳಿ ನಡೆಸಿದ್ದಾನೆ.
 
ಘಟನೆಗೆ ಕಾರಣ ತಿಳಿದು ಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments