Webdunia - Bharat's app for daily news and videos

Install App

ಮಂಗಳೂರು: ಜೈಲಿನಲ್ಲೇ ನಡೆದಿದೆ ಕೈದಿಗಳ ಭರ್ಜರಿ ಪಾರ್ಟಿ..?

Webdunia
ಗುರುವಾರ, 20 ಜುಲೈ 2017 (10:32 IST)
ಮಂಗಳೂರು:ಪರಪ್ಪನ ಅಗ್ರಹಾರ ಜೈಲಿನಲ್ಲಿನ ಅವ್ಯಹಾರ ಬೆಳಕಿಗೆ ಬರುತ್ತಿರುವ ಬೆನ್ನಲ್ಲೇ ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲೂ ವಿಚಾರಣಾಧೀನ ಕೈದಿಗಳ ಗುಂಪೊಂದು ಸಾಮೂಹಿಕವಾಗಿ ಮಾಂಸದೂಟ ಸವಿಯುತ್ತಿದ್ದಾರೆ ಎನ್ನಲಾದ ಫೋಟೊ ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಆಗಿದೆ. 
 
ಕೈದಿಗಳ ಭೇಟಿಗಾಗಿ ಬರುತ್ತಿರುವ ಅವರ ಸಂಬಂಧಿಕರು, ಹಿತೈಷಿಗಳು ಭರ್ಜರಿ ಮಾಂಸದೂಟ, ಬಿರಿಯಾನಿ,ಎಣ್ಣೆ ಇತ್ಯಾದಿಗಳನ್ನು ಜೈಲು ಸಿಬಂದಿ ಮೂಲಕ ಕೈದಿಗಳಿಗೆ ಒದಗಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಅಲ್ಲದೇ  ಕೈದಿಗಳಿಗೆ ಪೂರೈಸುವ ಆಹಾರದ ಪೊಟ್ಟಣದಲ್ಲಿ ಗಾಂಜಾ ಮತ್ತು ಇತರ ಮಾದಕ ವಸ್ತುಗಳು, ಮೊಬೈಲ್‌ ಫೋನ್‌, ಮೊಬೈಲ್‌ ಚಾರ್ಜರ್‌, ಚಾಕು, ಬ್ಲೇಡ್‌ ಮತ್ತಿತರ ಮಾರಕಾಯುಧಗಳೂ ರವಾನೆಯಾಗುತ್ತಿಲೆ ಎನ್ನಲಾಗಿದೆ. ಪೊಲೀಸರು ಹಲವು ಬಾರಿ ಜೈಲಿಗೆ ದಾಳಿ ಮಾಡಿ ಮೊಬೈಲ್‌ ಫೋನ್‌, ಚಾರ್ಜರ್‌, ಸಿಮ್‌ ಕಾರ್ಡ್‌, ಬ್ಲೇಡು, ಚಾಕು, ಗಾಂಜಾ ಇತ್ಯಾದಿಗಳನ್ನು ವಶಪಡಿಸಿಕೊಂಡಿದ್ದರು. ದಾಳಿಯ ಸಂದರ್ಭ ಪೊಲೀಸರ ಮೇಲೆ ಪ್ರತಿ ದಾಳಿ ನಡೆದದ್ದೂ ಇದೆ.
 
ಆದರೆ ಇದನ್ನು ಅಲ್ಲಗಳೆದಿರುವ ನೂತನ ಜೈಲು ಅಧೀಕ್ಷಕರಾದ ವಿಜಯ್‌ ರೋಡ್‌ಕರ್‌, ಹದಿನೈದು ದಿನಗಳ ಹಿಂದೆಯಷ್ಟೇ ಅಧಿಕಾರ ವಹಿಸಿಕೊಂಡಿದ್ದು, ನಾನು ಅಧಿಕಾರ ವಹಿಸಿಕೊಂಡ ಬಳಿಕ ಕೈದಿಗಳ ಭೇಟಿಗೆ ಬರುವ ಸಂದರ್ಶಕರು ತರುವ ಪೊಟ್ಟಣಗಳನ್ನು ಕೂಲಂಕಷವಾಗಿ ತಪಾಸಣೆ ಮಾಡಿ ಒಳಗೆ ಕೊಡಲಾಗುತ್ತದೆ. ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಆಗಿರುವ ಫೋಟೊ ಇತ್ತೀಚಿನದ್ದಲ್ಲ. ಆ ಚಿತ್ರದಲ್ಲಿರುವ ಇಬ್ಬರು ಕೈದಿಗಳು ಎರಡೂವರೆ ತಿಂಗಳ ಹಿಂದೆ ಬಿಡುಗಡೆ ಹೊಂದಿ ಹೋಗಿದ್ದಾರೆ. ವೈರಲ್‌ ಆಗಿರುವ ಫೋಟೊ 3 ತಿಂಗಳ ಹಿಂದಿನದ್ದಾಗಿರಬೇಕು ಎಂದಿದ್ದಾರೆ.
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

India Pakistan: ಭಾರತೀಯ ಸೇನೆಯಿಂದ ಮಧ್ಯಾಹ್ನ ಮಹತ್ವದ ಪತ್ರಿಕಾಗೋಷ್ಠಿ

Arecanut price today: ಅಡಿಕೆ ಬೆಲೆ ಇಂದು ಎಷ್ಟಾಗಿದೆ ನೋಡಿ

Share Market: ಕದನವಿರಾಮ ಬೆನ್ನಲ್ಲೇ ಷೇರು ಮಾರುಕಟ್ಟೆ ಹೂಡಿಕೆದಾರರಿಗೆ ಗುಡ್ ನ್ಯೂಸ್

Gold Price today: ಚಿನ್ನದ ಬೆಲೆಯಲ್ಲಿ ಇಂದು ಭಾರೀ ಇಳಿಕೆ

ಚೀನಾವೂ ಬೇಡ ಟರ್ಕಿಯೂ ಬೇಡ: ಎಲ್ಲಾ ಬ್ಯಾನ್ ಅಂತಿದ್ದಾರೆ ಭಾರತೀಯರು

ಮುಂದಿನ ಸುದ್ದಿ