Webdunia - Bharat's app for daily news and videos

Install App

ಪ್ರಧಾನಿಯಿಂದ ಮೂರು ಯೋಜನೆಗಳಿಗೆ ಚಾಲನೆ: ಸ್ಮಾರ್ಟ್ ಸಿಟಿಯಾಗಲಿವೆ ರಾಜ್ಯದ 6 ಮಹಾನಗರಗಳು

Webdunia
ಗುರುವಾರ, 25 ಜೂನ್ 2015 (11:33 IST)
ಸ್ಮಾರ್ಟ್ ಸಿಟಿ, ಅಮೃತ್ ಮಿಷನ್ ಹಾಗೂ ಅರ್ಬನ್ ಹೌಸಿಂಗ್ ಮಿಷನ್ ಎಂಬ ಕೇಂದ್ರ ಸರ್ಕಾರದ ಮೂರು ಮಹತ್ವಾಕಾಂಕ್ಷಿ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಇಲ್ಲಿನ ವಿಜ್ಞಾನ ಭವನದಲ್ಲಿ ಚಾಲನೆ ನೀಡಿದರು.
 
ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ವಿಶ್ವದ ಚಿತ್ತ ಭಾರತದತ್ತ ನೆಟ್ಟಿದೆ. ಪ್ರಪಂಚವು ಅತೀ ವೇಗವಾಗಿ ಬೆಳೆಯುತ್ತಿದ್ದು, ಸುಮ್ಮನೆ ಕೂರಲು ಸಾಧ್ಯವಿಲ್ಲ. ಆದ ಕಾರಣ ನಾವು ನಮ್ಮ ಬದುಕಿನ ಹಾದಿಯನ್ನು ಬದಲಿಸಿಕೊಳ್ಳಬೇಕಿದೆ. ಬಡವರನ್ನು ಅವರು ಇರುವ ದುಸ್ಥಿತಿಯಲ್ಲಿಯೇ ಬಿಡಲು ಸಾಧ್ಯವಿಲ್ಲ. ನಗರಗಳಲ್ಲಿ ವಿಶ್ವಮಟ್ಟದ ಸೌಲಭ್ಯಗಳು ದೊರೆಯುಂತಾಗಬೇಕು. ಈ ಮೂಲಕ ಭೂಮಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಿದೆ ಎಂದ ಅವರು, ಜಯಪ್ರಕಾಶ್ ನಾರಾಯಣ್ ಅವರು ಕಂಡ ಕನಸು ನನಸಾಗಬೇಕಿದೆ ಎನ್ನುವ ಮೂಲಕ ತುರ್ತುಪರಿಸ್ಥಿತಿಯನ್ನೂ ನೆನಪಿಸಿಕೊಂಡರು. 
 
ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ದೇಶದ 100 ಮಹಾನಗರಗಳನ್ನು ವಿಶ್ವ ಮಟ್ಟದಲ್ಲಿ ಅಭಿವೃದ್ಧಿ ಪಡಿಸುವ ಗುರಿ ಹೊಂದಲಾಗಿದ್ದು, ಇದರಲ್ಲಿ ಕರ್ನಾಟಕದ ಆರು ಮಹಾನಗರಗಳೂ ಸೇರಿವೆ. ಆದರೆ ನಗರಗಳ ಹೆಸರುಗಳನ್ನು ಬಹಿರಂಗಗೊಳಿಸಲಾಗಿಲ್ಲ. ಇನ್ನು ಈ ಸಂಬಂಧ ಕರ್ನಾಟಕ ರಾಜ್ಯ ಸರ್ಕಾರವು 12 ನಗರಗಳ ಹೆಸರುಗಳನ್ನು ಶಿಫಾರಸು ಮಾಡಿತ್ತು. 
 
ಇನ್ನು ಅಮೃತ್ ಮಿಷನ್ ಅಡಿಯಲ್ಲಿ ಒಂದು ಲಕ್ಷ ಜನಸಂಖ್ಯೆಗೂ ಅಧಿಕವಾಗಿ ವಾಸಿಸುತ್ತಿರುವ 500 ನಗರಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದ್ದು, ಕರ್ನಾಟಕದ 27 ನಗರಗಳು ಸ್ಥಾನ ಪಡೆದಿವೆ. ಅಂತೆಯೇ ಅರ್ಬನ್ ಹೌಸಿಂಗ್ ಮಿಷನ್ ಅಡಿಯಲ್ಲಿ ನಗರವಾಸಿಗಳಿಗೆ ಮನೆ ವಿತರಿಸಲು ಉದ್ದೇಶಿಸಲಾಗಿದ್ದು, ಬಡವರು ತಾವೇ ಮನೆ ನಿರ್ಮಿಸಿಕೊಳ್ಳಲು 2 ಲಕ್ಷ ಹಣ ಪಾವತಿಸಲಾಗುವುದು. ಈ ಯೋಜನೆಯ ಮೂಲಕ 2022ರ ವೇಳೆ ರಾಷ್ಟ್ರದ ಎಲ್ಲಾ ಜನತೆಗೆ ಮನೆ ಒದಗಿಸುವ ಉದ್ದೇಶವನ್ನು ಹೊಂದಲಾಗಿದೆ.  

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments