Select Your Language

Notifications

webdunia
webdunia
webdunia
webdunia

ಬಸ್ ಚಾಲಕನ ಸಮಯಪ್ರಜ್ಞೆಯಿಂದ ಮೂವರ ಜೀವ ಉಳಿಯಿತು!

ಬಸ್ ಚಾಲಕನ ಸಮಯಪ್ರಜ್ಞೆಯಿಂದ ಮೂವರ ಜೀವ ಉಳಿಯಿತು!
ಹಳೇಬೀಡು , ಗುರುವಾರ, 23 ಅಕ್ಟೋಬರ್ 2014 (14:55 IST)
ಹಳೇಬೀಡಿನಿಂದ ಬರುತ್ತಿದ್ದ ಸರ್ಕಾರಿ ಬಸ್ಸೊಂದರ ಚಾಲಕನೊಬ್ಬ ಮೂವರು ಬೈಕ್ ಸವಾರರು, ಎರಡು ಜಾನುವಾರುಗಳ ಪ್ರಾಣ ರಕ್ಷಿಸಲು ಬಸ್ಸನ್ನು ಬಲಕ್ಕೆ ತಿರುಗಿಸಿದ್ದರಿಂದ ಮೂವರು ಬೈಕ್ ಸವಾರರ ಪ್ರಾಣ ಉಳಿದಿದೆ.  ಸರ್ಕಾರಿ ಬಸ್ ಚಾಲಕ ನಾರಾಯಣಪ್ಪ ಅವರ ಸಮಯಪ್ರಜ್ಞೆಯಿಂದ ಐದು ಜೀವಗಳು ಉಳಿದಿವೆ. ಬಸ್ಸಿನ ಎದುರಾಗಿ ಒಂದು ಸ್ಕೂಟಿ ಮತ್ತು ಬೈಕ್ ಹೊರಟಿತ್ತು.

ಎದುರಿಗೆ ಬರುತ್ತಿದ್ದ ಸ್ಕೂಟಿ ದಿಢೀರನೇ ಸ್ಕಿಡ್ ಆಗಿ ಕೆಳಕ್ಕೆ ಬಿದ್ದಿದ್ದರಿಂದ ಎದುರಿನಿಂದ ಬರುತ್ತಿದ್ದ ಸರ್ಕಾರಿ ಬಸ್ ಚಾಲಕ ಸ್ಟೂಟಿಯಲ್ಲಿದ್ದ ಇಬ್ಬರು  ಸವಾರರ ಪ್ರಾಣರಕ್ಷಿಸುವುದಕ್ಕೋಸ್ಕರ ಬಲಕ್ಕೆ ಹಠಾತ್ತನೇ ಬಸ್ ತಿರುಗಿಸಿದ್ದರಿಂದ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಮನೆಯೊಂದಕ್ಕೆ ನುಗ್ಗಿತು.

ಆದರೆ ಮೂರು ಜೀವಗಳ ಪ್ರಾಣ ಉಳಿದಿದ್ದಕ್ಕೆ ಬಸ್ ಚಾಲಕ ನಿಟ್ಟುಸಿರು ಬಿಟ್ಟಿದ್ದಾನೆ ಮತ್ತು ಗ್ರಾಮಸ್ಥರು ಕೂಡ ಚಾಲಕನನ್ನು ಅಭಿನಂದಿಸಿದ್ದಾರೆ. 

Share this Story:

Follow Webdunia kannada