Webdunia - Bharat's app for daily news and videos

Install App

Mallikarjun Kharge: ಚುಟ್ ಪುಟ್ ದಾಳಿ ಎಂದ ಮಲ್ಲಿಕಾರ್ಜುನ ಖರ್ಗೆಗೂ ಪಪ್ಪು ಮನಸ್ಥಿತಿ ಬಂತಾ: ಪ್ರತಾಪ್ ಸಿಂಹ

Krishnaveni K
ಬುಧವಾರ, 21 ಮೇ 2025 (12:47 IST)
ಹೊಸಪೇಟೆ: ಆಪರೇಷನ್ ಸಿಂಧೂರ್ ಬಗ್ಗೆ ಚುಟ್ ಪುಟ್ ದಾಳಿ ಎಂದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಬಗ್ಗೆ ತೀವ್ರ ವಾಗ್ದಾಳಿ ನಡೆಸಿರುವ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ, ನಿಮಗೂ ಪಪ್ಪು ಮನಸ್ಥಿತಿ ಬಂತಾ ಎಂದು ಪ್ರಶ್ನಿಸಿದ್ದಾರೆ.

ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರಂತಹ ಹಿರಿಯ ನಾಯಕರು ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ್ ದಾಳಿಯನ್ನು ಚುಟ್ ಪುಟ್ ದಾಳಿ ಎಂದಿದ್ದು ನನಗೆ ಅಚ್ಚರಿಯಾಗಿದೆ. ಖರ್ಗೆ ಸಾಹೇಬ್ರೇ ನೀವ್ಯಾಕೆ ನಿಮ್ಮ ಮಗನ ರೀತಿ ಮಾತನಾಡಲು ಶುರು ಮಾಡಿದ್ದೀರಿ ಎಂದು ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.

ಬಹುಶಃ ದೆಹಲಿಯಲ್ಲಿ ಕಾಂಗ್ರೆಸ್ ನ ಪಪ್ಪು ರಾಹುಲ್ ಗಾಂಧಿ ಜೊತೆ ಇದ್ದೂ ಇದ್ದೂ ಖರ್ಗೆ ಸಾಹೇಬ್ರಿಗೂ ಪಪ್ಪು ಮನಸ್ಥಿತಿ ಬಂದಿದೆಯಾ ಅಂತ ಅನುಮಾನವಾಗ್ತಿದೆ ನನಗೆ ಎಂದು ತೀವ್ರವಾಗಿ ಟೀಕಿಸಿದ್ದಾರೆ.

ಇದು ಚುಟು ಪುಟು ದಾಳಿ ನಂತರವೇ ಚೀನಾ, ಅಮೆರಿಕಾದಂತಹ ದೊಡ್ಡ ರಾಷ್ಟ್ರಗಳ ಏರ್ ಡಿಫೆನ್ಸ್ ಸಿಸ್ಟಂ ಕುಸಿದು ಹೋಗಿದ್ದು. ಈ ಚುಟುಪುಟು ದಾಳಿಯ ನಂತರವೇ ಪಾಕಿಸ್ತಾನದ 11 ವಾಯುನೆಲೆ ನಾಶವಾಗಿದ್ದು, ಈ ದಾಳಿಯ ನಂತರವೇ ನಮ್ಮ ಬ್ರಹ್ಮೋಸ್ ಕ್ಷಿಪಣಿಗೆ 17 ರಾಷ್ಟ್ರಗಳಿಂದ ಬೇಡಿಕೆ ಬಂದಿದ್ದು ಎಂದು ಪ್ರತಾಪ್ ಸಿಂಹ ವ್ಯಂಗ್ಯ ಮಾಡಿದ್ದಾರೆ. ನಿಮ್ಮದೇ ಪಕ್ಷದ ಸಲ್ಮಾನ್ ಖುರ್ಷಿದ್ ಅವರೇ ನಿನ್ನೆ ಹೇಳಿಕೆ ನೀಡಿದ್ದಾರೆ. ಈ ದಾಳಿಯ ನಂತರವೇ ಪಾಕಿಸ್ತಾನದ ಹಿರಿಯ ಸೇನಾಧಿಕಾರಿ ಭಾರತಕ್ಕೆ ಕರೆ ಮಾಡಿ ಕದನ ವಿರಾಮ ಮಾಡೋಣ ಎಂದಿದ್ದು. ಚುಟು ಪುಟು ದಾಳಿ ಎಂದರೆ ಅವರು ಯಾಕೆ ಕರೆ ಮಾಡುತ್ತಿದ್ದರು? ಪಾಕಿಸ್ತಾನದ ಪ್ರಧಾನಿಯವರೇ ಭಾರತ ನಮ್ಮ ವಾಯುನೆಲೆ ಮೇಲೆ ಕ್ಷಿಪಣಿ ದಾಳಿ ಮಾಡಿತ್ತು ಎಂದಿದ್ದಾರೆ. ಚುಟುಪುಟು ದಾಳಿಯಲ್ಲಿ ಯಾರು ಸಾರ್ ಮಿಸೈಲ್ ಹಾಕ್ತಾರೆ? ಮೋದಿಯವರ ಮೇಲಿನ ಧ್ವೇಷಕ್ಕೆ ಭಾರತೀಯ ಸೇನೆಯ ದಾಳಿಯನ್ನೇ ಸಣ್ಣ ದಾಳಿ ಎನ್ನುತ್ತೀರಲ್ಲಾ ಇದು ನಿಮ್ಮ ವ್ಯಕ್ತಿತ್ವಕ್ಕೆ ಸರಿ ಹೊಂದುತ್ತಾ ಎಂದು ಪ್ರಶ್ನೆ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಂದೇಶ್‌ಖಾಲಿ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಸಿಬಿಐ: ಟಿಎಂಸಿ ಮುಖಂಡ ಶಹಜಹಾನ್‌ ಶೇಖ್‌ಗೆ ಶಾಕ್‌

ಕೌಟುಂಬಿಕ ಕಲಹದಿಂದ ಬೇಸತ್ತು ಲಾಡ್ಜ್‌ನಲ್ಲೇ ಸಾವಿಗೆ ಶರಣಾದ ದಾವಣಗೆರೆಯ ಸಬ್‌ ಇನ್‌ಸ್ಪೆಕ್ಟರ್‌

ಸಿಎಂ ಬದಲಾವಣೆ ಕೂಗಿನ ಬೆನ್ನಲ್ಲೇ ಸಿದ್ದರಾಮಯ್ಯಗೆ ಎಐಸಿಸಿಯಲ್ಲಿ ಹೊಸ ಜವಾಬ್ದಾರಿ: ಏನಿದು ಲೆಕ್ಕಾಚಾರ

ಅಜ್ಞಾತ ವಾಸದಿಂದ ಹೊರಬಂದ ಇರಾನ್‌ನ ಸರ್ವೋಚ್ಚ ನಾಯಕ: ಜನರತ್ತ ಕೈಬೀಸಿದ ಅಯಾತೊಲ್ಲಾ ಅಲಿ

ಟೆಕ್ಸಾಸ್‌ನಲ್ಲಿ ಹಠಾತ್ ಪ್ರವಾಹದಿಂದ 50 ಮಂದಿ ಸಾವು: 850 ಮಂದಿಯ ರಕ್ಷಣೆ, 27 ವಿದ್ಯಾರ್ಥಿನಿಯರು ನಾಪತ್ತೆ

ಮುಂದಿನ ಸುದ್ದಿ
Show comments