Webdunia - Bharat's app for daily news and videos

Install App

ಸಿದ್ದರಾಮಯ್ಯನವರಿಗೆ ಕಷ್ಟ ಬಂದಾಗ ಮುಸ್ಲಿಂ ದೇವರು ನೆನಪಾಗಲ್ಲ, ಹಿಂದೂ ದೇವರೇ ಬೇಕಾಗೋದು: ಪ್ರತಾಪ್ ಸಿಂಹ

Krishnaveni K
ಸೋಮವಾರ, 4 ನವೆಂಬರ್ 2024 (14:18 IST)
ಶಿಗ್ಗಾಂವಿ: ಹಗರಣ ಬಂದಾಗ ಸಿಎಂ ಸಿದ್ದರಾಮಯ್ಯನವರು ಎಂದೂ ಕಾಲಿಡದವರೂ ದೇವಾಲಯಗಳಿಗೆ ಹೋಗ್ತಾರೆ. ಅವರಿಗೂ ಗೊತ್ತಾಗಿದೆ ಕಷ್ಟ ಬಂದಾಗ ಕಾಪಾಡೋದಕ್ಕೆ ಹಿಂದೂ ದೇವರೇ ಆಗಬೇಕು ಅಂತ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ವ್ಯಂಗ್ಯ ಮಾಡಿದ್ದಾರೆ.

ಹಿಂದೆಲ್ಲಾ ಸಿದ್ದರಾಮಯ್ಯ ಮೈಸೂರು ದಸರಾಗೆ ಬಂದರೂ ನಾಡದೇವತೆ ಚಾಮುಂಡೇಶ್ವರಿ ದೇವಾಲಯಕ್ಕೆ ಕಾಲಿಡ್ತಾ ಇರಲಿಲ್ಲ. ಆದರೆ ಈಗ ಮುಡಾ ಹಗರಣ ಮೈಮೇಲೆ ಬಂದಾಗ ಎಂದೂ ಹೋಗದವರು ಚಾಮುಂಡೇಶ್ವರಿ ದೇವಾಲಯಕ್ಕೆ ಪದೇ ಪದೇ ಹೋದರು. ಹಾಸನದಲ್ಲಿ ಹಾಸನಾಂಬೆಯ ದೇವಾಲಯಕ್ಕೆ ತೆರಳಿ ಕಾಪಾಡಮ್ಮಾ ಎಂದು ಬೇಡಿಕೊಂಡರು.

ಯಾಕೆಂದರೆ ಅವರಿಗೂ ಗೊತ್ತಾಗಿದೆ. ಕಷ್ಟ ಬಂದಾಗ ಕಾಪಾಡಲು ಯಾವ ಮುಸ್ಲಿಂ ದೇವರು, ಕ್ರಿಶ್ಚಿಯನ್ ದೇವರು ಬರಲ್ಲ. ಹಿಂದೂ ದೇವರೇ ಬರಬೇಕು ಅಂತ’ ಎಂದು ಪ್ರತಾಪ್ ಸಿಂಹ ವ್ಯಂಗ್ಯ ಮಾಡಿದ್ದಾರೆ. ಈ ವೇಳೆ ಜೊತೆಗಿದ್ದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಶಾಸಕ ಸಿಟಿ ರವಿ ಜೋರಾಗಿ ನಕ್ಕರು.

ವಕ್ಫ್ ಬೋರ್ಡ್ ನೋಟಿಸ್ ವಿರುದ್ಧದ ಪ್ರತಿಭಟನೆಯಲ್ಲಿ ಮಾತನಾಡಿದ ಪ್ರತಾಪ್ ಸಿಂಹ ‘ಭೂ ಸುಧಾರಣೆ ನೀತಿ ದೇವರಾಜ ಅರಸು ಕಾಲದಲ್ಲಿ ಜಾರಿಗೆ ಬಂತು. ಅದರ ಪ್ರಕಾರ ಎಷ್ಟೋ ಹಿಂದೂ ದೇವಾಲಯಗಳ, ಶ್ರೀಮಂತ ಜಮೀನ್ದಾರರ ಆಸ್ತಿಗಳು ಉಳುಮೆ ಮಾಡುವವರಿಗೆ ಹೋಯಿತು. ಆದರೆ ಈ ಕಾಯಿದೆಯಲ್ಲಿ ವಕ್ಫ್ ಬೋರ್ಡ್ ನ್ನು ಯಾಕೆ ಬಿಟ್ಟರು? ನೀವೆಲ್ಲಾ ನಾನು ಗೌಡ, ನಾನು ಲಿಂಗಾಯತ, ನಾನು ಎಸ್ ಸಿ, ಎಸ್ ಟಿ ಎಂದು ಹೇಳುತ್ತಾ ಕೂರಬೇಡಿ. ನಮ್ಮ ಜಮೀನುಗಳನ್ನು ಉಳಿಸಿಕೊಳ್ಳಬೇಕಾದರೆ ನಾವೆಲ್ಲಾ ಹಿಂದೂಗಳು ಎಂದು ಹೋರಾಟ ಮಾಡಿ’ ಎಂದು ಪ್ರತಾಪ್ ಸಿಂಹ ಕರೆ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಪ್ತಾಪ್ತೆ ಮೇಲೆ ನಿರಂತರ ರೇಪ್ ಮಾಡಿ, ಗರ್ಭಪಾತ: ಪುತ್ತೂರಿನ 7 ವರ್ಷಗಳ ಹಿಂದಿನ ಪ್ರಕರಣಕ್ಕೆ ತೀರ್ಪು ಪ್ರಕಟ

ಮತಗಳ್ಳತನ: ರಾಹುಲ್ ನೇತೃತ್ವದಲ್ಲಿ ಆ.5 ರಂದು ಪ್ರತಿಭಟನೆ, ಡಿಕೆ ಶಿವಕುಮಾರ್

ತಮಿಳುನಾಡು ಬಿಜೆಪಿ ಉಪಾಧ್ಯಕ್ಷೆತಾಗಿ ನಟಿ ಖುಷ್ಬು ಸುಂದರ್‌ ಜವಾಬ್ದಾರಿ

ಆರಾಮಾಗಿ ನಡೆದುಕೊಂಡು ಹೋಗುತ್ತಿರುವಾಗಲೇ ಕಟ್ಟಡದಿಂದ ಜಿಗಿದು ವಿದ್ಯಾರ್ಥಿನಿ ಸೂಸೈಡ್‌, ಭಯಾನಕ ವಿಡಿಯೋ

ಅಕ್ಟೋಬರ್‌ನಲ್ಲಿ ಸಿಎಂ ಬದಲಾವಣೆ ಪಕ್ಕಾ, ಖರ್ಗೆ ಸರಿಯಾದ ಸಮಯಕ್ಕೆ ಕಲ್ಲು ಹೊಡೆದಿದ್ದಾರೆ: ಆರ್‌ ಅಶೋಕ್‌

ಮುಂದಿನ ಸುದ್ದಿ
Show comments