Webdunia - Bharat's app for daily news and videos

Install App

ಕಲುಷಿತ ನೀರಿನಿಂದ ಕರೆಂಟ್! ಸಚಿವ ಡಿಕೆಶಿಗೆ ಐಡಿಯಾ ಕೊಟ್ಟವರಾರು?

Webdunia
ಗುರುವಾರ, 30 ಮಾರ್ಚ್ 2017 (12:25 IST)
ಬೆಂಗಳೂರು: ಬೆಳಂದೂರು ಕೆರೆಯಲ್ಲಿ ಕಲುಷಿತ ನೀರಿನಿಂದಾಗಿ ಬಿಳಿ ನೊರೆ ತೇಲಿಬರುತ್ತಿರುವ ವಿಚಾರದಲ್ಲಿ ಬೆಂಗಳೂರಿಗರಲ್ಲಿ ಆತಂಕ ಸೃಷ್ಟಿಯಾಗಿತ್ತು. ಆದರೆ ಈ ಕಲುಷಿತ ನೀರಿನ ಸದುಪಯೋಗ ಪಡೆಯಬಹುದಂತೆ.

 

ಹೌದು. ಇಂಧನ ಸಚಿವ ಡಿಕೆ ಶಿವಕುಮಾರ್ ಗೆ ಇಂತಹದ್ದೊಂದು ಐಡಿಯಾ ಬಂದಿದೆ. ಈ ಐಡಿಯಾ ಕೊಟ್ಟವರು ಅವರ ಸ್ನೇಹಿತರಂತೆ. ಹಾಗಂತ ಅವರೇ ಹೇಳಿಕೊಂಡಿದ್ದಾರೆ. ಬೆಳಂದೂರು ಕೆರೆಯ ಸ್ಥಿತಿಯ ಬಗ್ಗೆ ಭಾರೀ ಸುದ್ದಿಯಾಗಿತ್ತು.

 
ಈ ಸುದ್ದಿಯನ್ನು ಓದಿದ ಅವರ ಸ್ನೇಹಿತರು ಕರೆ ಮಾಡಿ ಕಲುಷಿತ ನೀರಿನಿಂದ ಕರೆಂಟ್ ಉತ್ಪಾದಿಸಬಹುದು ಎಂದು ಐಡಿಯಾ ಕೊಟ್ಟರಂತೆ. ಅದರಂತೆ ಸಚಿವರು ಜರ್ಮನ್ ತಾಂತ್ರಿಕತೆಯನ್ನು ನೋಡಿದ್ದಾರಂತೆ. ಇದೀಗ ಜರ್ಮನ್ ತಂತ್ರಜ್ಞಾನ ಬಳಸಿ ಈ ಕಲುಷಿತ ಕೆರೆಯ ಸದುಪಯೋಗ ಪಡೆಯಲು ಇಂಧನ ಸಚಿವರು ಯೋಜನೆ ರೂಪಿಸುತ್ತಿದ್ದಾರಂತೆ!

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments