Webdunia - Bharat's app for daily news and videos

Install App

ಜನಪ್ರಿಯ ಕಾದಂಬರಿ ಪರ್ವ ಆಧರಿಸಿ ತೆಲುಗು ಸಿನಿಮಾ

Webdunia
ಬುಧವಾರ, 8 ಅಕ್ಟೋಬರ್ 2014 (11:05 IST)
ರಾಜ್ಯದ ಹೆಸರಾಂತ  ಕಾದಂಬರಿಕಾರರು, ಸಾಹಿತಿಗಳು ಆದ ಡಾ. ಎಸ್ ಎಲ್ ಭೈರಪ್ಪ ಅವರ  ಜನಪ್ರಿಯ ಕಾದಂಬರಿ ಪರ್ವ ಸಿನಿಮಾ ರೂಪದಲ್ಲಿ ಬೆಳ್ಳಿತೆರೆಯ ಮೇಲೆ ಜೀವಂತವಾಗಿ ಮೂಡಿಬರಲಿದೆ. 

ಟಾಲಿವುಡ್‌ನ ನಂಬರ್ ಒನ್ ನಿರ್ದೇಶಕರಾದ ರಾಜಮೌಳಿ ಈ ಸಿನಿಮಾವನ್ನು  ನಿರ್ದೇಶಿಸಲಿದ್ದಾರೆ. 
 
ಮೂಲಗಳ ಪ್ರಕಾರ ರಾಜಮೌಳಿ ಕೆಲ ದಿನಗಳ ಹಿಂದೆ ಕನ್ನಡ ಕಾದಂಬರಿ ಪರ್ವ ಆಧರಿಸಿದ ಸಿನಿಮಾವನ್ನು ನಿರ್ದೇಶಿಸಿಸುವ  ಇಂಗಿತವನ್ನು ವ್ಯಕ್ತಪಡಿಸಿದ್ದರು. ಹಿಂದೂ ಮಹಾಕಾವ್ಯ ಮಹಾಭಾರತದಿಂದ ಸ್ಫೂರ್ತಿ ಪಡೆದು ರಚಿಸಲಾದ ಈ ಕಾದಂಬರಿ ಇಂಗ್ಲೀಷ್ ಭಾಷೆಗು ಕೂಡ ಅನುವಾದಗೊಂಡಿದೆ. ಇದನ್ನು ಚಲನಚಿತ್ರವನ್ನಾಗಿಸಲು ನಿರ್ಧರಿಸಿರುವ ರಾಜಮೌಳಿ ಆ ಕುರಿತು ಭೈರಪ್ಪನವರನ್ನು ಸಂಪರ್ಕಿಸಿ ಒಪ್ಪಿಗೆ ಪಡೆದಿದ್ದಾರೆಯೇ ಎಂಬುದು ಖಚಿತವಾಗಿಲ್ಲ. 
 
ಈ ಹಿಂದೆ, ಡಾ. ಭೈರಪ್ಪನವರ ಕಾದಂಬರಿ 'ವಂಶವೃಕ್ಷ' ಅನಿಲ್ ಕಪೂರ್ ಅಭಿನಯದಲ್ಲಿ, 'ವಂಶವೃಕ್ಷಂ' ಶೀರ್ಷಿಕೆಯಡಿ ಬಾಪು ನಿರ್ದೇಶನದಡಿಯಲ್ಲಿ ತೆಲುಗು ಭಾಷೆಯಲ್ಲೇ ಚಿತ್ರೀಕರಣಗೊಂಡಿತ್ತು. ಕನ್ನಡ ಚಲನಚಿತ್ರ ನಿರ್ದೇಶಕರು ಸಹ ಭೈರಪ್ಪನವರ ಕಾದಂಬರಿ ಆಧರಿಸಿ ಸಿನೆಮಾ ನಿರ್ದೇಶಿಸುವ ಇರಾದೆಯನ್ನು ವ್ಯಕ್ತಪಡಿಸಿದ್ದರು. ಆದರೆ ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ.  

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments