Select Your Language

Notifications

webdunia
webdunia
webdunia
webdunia

ಟಿವಿ 9 ಕೇಬಲ್ ಪ್ರಸಾರ ಸ್ಥಗಿತಕ್ಕೆ ಜನಾರ್ದನ ಪೂಜಾರಿ ಖಂಡನೆ

ಟಿವಿ 9 ಕೇಬಲ್ ಪ್ರಸಾರ ಸ್ಥಗಿತಕ್ಕೆ ಜನಾರ್ದನ ಪೂಜಾರಿ ಖಂಡನೆ
ಬೆಂಗಳೂರು , ಮಂಗಳವಾರ, 25 ನವೆಂಬರ್ 2014 (13:05 IST)
ಟಿವಿ 9 ಕೇಬಲ್  ಪ್ರಸಾರ ಸ್ಥಗಿತಗೊಳಿಸಿದ ಕ್ರಮವನ್ನು ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಖಂಡಿಸಿದ್ದಾರೆ. ಬೀದಿಯಲ್ಲಿ ಸರ್ಕಾರದ ಮಾನ ಹರಾಜು ಹಾಗುತ್ತಿದೆ. ಅಷ್ಟೂ ಕೂಡ ಜ್ಞಾನ ನಿಮಗಿಲ್ಲವೇ? ಪ್ರಜಾಪ್ರಭುತ್ವ ಕೊಲೆಯಾಗಬೇಕೆಂದು ನೀವು ಬಯಸುತ್ತೀರಾ.

ನೀವು ತಪ್ಪು ಮಾಡಿ ಕ್ಷಮೆ ಕೇಳಲು ಏನಾಗಿದೆ? ಎಂದು ಪೂಜಾರಿ ಪ್ರಶ್ನಿಸಿದರು. ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಜನಾರ್ದನ ಪೂಜಾರಿ ಮಾತನಾಡುತ್ತಿದ್ದರು.  ಡಿ.ಕೆ. ಶಿವಕುಮಾರ್ ಟಿವಿ9ಗೆ ಕ್ಷಮೆಯಾಚಿಸಬೇಕೆಂದು ಪೂಜಾರಿ ಸೂಚಿಸಿದರು.
 
ಏತನ್ಮಧ್ಯೆ ವಿವಿಧ ಸುದ್ದಿವಾಹಿನಿಗಳ ಮುಖ್ಯಸ್ಥರು ಮತ್ತು ಕೆಲವು ಪತ್ರಿಕಾ ಸಂಪಾದಕರು ವಿಕಾಸಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಸಭೆಯಲ್ಲಿ ವಾರ್ತಾ ಸಚಿವ ರೋಷನ್ ಬೇಗ್ ಉಪಸ್ಥಿತರಿದ್ದರು.

Share this Story:

Follow Webdunia kannada