Select Your Language

Notifications

webdunia
webdunia
webdunia
webdunia

ನನ್ನನ್ನು ತೇಜೋವಧೆ ಮಾಡುವ ರಾಜಕೀಯ ಪಿತೂರಿ: ಎಂ.ಶಿವಣ್ಣ ಸ್ಪಷ್ಟನೆ

ನನ್ನನ್ನು ತೇಜೋವಧೆ ಮಾಡುವ ರಾಜಕೀಯ ಪಿತೂರಿ: ಎಂ.ಶಿವಣ್ಣ ಸ್ಪಷ್ಟನೆ
, ಸೋಮವಾರ, 21 ಏಪ್ರಿಲ್ 2014 (11:44 IST)
ಮೈಸೂರು: ಮೈಸೂರಿನಲ್ಲಿ ಎಂ. ಶಿವಣ್ಣ ಸುದ್ದಿಗೋಷ್ಠಿ ನಡೆಸಿ ತಾನು ನಾಪತ್ತೆಯಾಗಿರುವುದಾಗಿ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಇದು ತಮ್ಮ ತೇಜೋವಧೆ ಮಾಡುವ ರಾಜಕೀಯ ಪಿತೂರಿ ಎಂದು ಶಿವಣ್ಣ ಕಣ್ಣೀರಿಡುತ್ತಾ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.ಶಿವಣ್ಣ ಭಾವುಕರಾಗಿ ಮಾತನಾಡುವಾಗ ಅವರ ಕಣ್ಣಿನಿಂದ ಗಳಗಳನೇ ಕಣ್ಣೀರಧಾರೆ ಹರಿಯಿತು. ನಾನು ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ, ಈ ರೀತಿ ಮಾಡುವುದಕ್ಕೆ ಷಡ್ಯಂತ್ರ ಮಾಡಿದ್ದಾರೆ.

ನಾನೇನಾದರೂ ತಪ್ಪು ಮಾಡಿದ್ದರೆ ಶಿಕ್ಷೆಗೆ ಗುರಿಯಾಗಲು ಸಿದ್ದನಿದ್ದೇನೆ ಎಂದು ಹೇಳಿದ್ದರು. ನಾನು 35 ವರ್ಷಗಳ ಕಾಲ ರಾಜಕೀಯ ಮಾಡಿದವನು. ಆದರೆ ಚುನಾವಣೆ ದಿನವೇ ಈ ರೀತಿಯ ವರದಿ ಮಾಡುವ ಷಡ್ಯಂತ್ರವೇನು. ನಾನು ಬೇರೆ ಪಕ್ಷದೊಂದಿಗೆ ಶಾಮೀಲಾಗಿದ್ದರೆ ಸಾಬೀತು ಪಡಿಸಲಿ, ಸಾರ್ವಜನಿಕ ಶಿಕ್ಷೆಗೆ ಗುರಿಯಾಗಲು ಸಿದ್ಧನಿದ್ದೇನೆ ಎಂದು ನುಡಿದರು.

ಸುಳ್ಳುಸುದ್ದಿ ಹಬ್ಬಿಸಿರುವ ಮಾಧ್ಯಮದ ಮೇಲೆ ಯಾವ ರೀತಿ ಕಾನೂನು ಕ್ರಮ ಕೈಗೊಳ್ಳಬಹುದೆಂದು ಪರಿಶೀಲಿಸುವುದಾಗಿ ಶಿವಣ್ಣ ಹೇಳಿದರು.

Share this Story:

Follow Webdunia kannada