ಕೆಎಸ್ಆರ್ಪಿ ನಾಲ್ಕನೇ ಬೆಟಾಲಿಯನ್ ಎಸ್ಪಿ ರೇವಣ್ಣನವರ್ ಪರಪ್ಪನ ಅಗ್ರಹಾರದ ಬಳಿ ಮನೆ ಕಟ್ಟಿಸುತ್ತಿದ್ದಾರೆ. ಆದರೆ ಮನೆ ಕಟ್ಟುವ ಸ್ಥಳದಲ್ಲಿ ಪ್ರತಿ ದಿನ 15ರಿಂದ 20 ಪೊಲೀಸರು ಶ್ರಮದಾನ ಮಾಡುತ್ತಿದ್ದಾರೆ. ಪೊಲೀಸರು ಸರ್ಕಾರಿ ನೌಕರರಾ ಅಥವಾ ಅವರ ಮನೆ ಆಳುಗಳೇ ಎಂದು ಈಗ ಕೇಳುವಂತಾಗಿದೆ.
ಸುಮಾರು 15ರಿಂದ 20 ಪೊಲೀಸ್ ಪೇದೆಗಳು ವ್ಯಾನ್ನಲ್ಲಿ ಬಂದಿಳಿದು ಕಟ್ಟಡ ನಿರ್ಮಾಣದ ಕೆಲಸಗಳನ್ನು ನಮ್ಮ ಜತೆ ಮಾಡುತ್ತಾರೆ ಎಂದು ಅಲ್ಲಿನ ಮನೆ ನಿರ್ಮಾಣ ಕಾರ್ಮಿಕರು ಬಾಯಿಬಿಟ್ಟಿದ್ದಾರೆ. ಪೇದೆಗಳ ದುರ್ಬಳಕೆ ಕುರಿತು ತಮಗೂ ಮಾಹಿತಿ ಬಂದಿದೆ.
ಈ ಕುರಿತು ತನಿಖೆ ನಡೆಸುತ್ತಿದ್ದು, ನಿಜವಾಗಿದ್ದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಮುಖ್ಯಸ್ಥರು ಹೇಳಿದ್ದಾರೆ.