Select Your Language

Notifications

webdunia
webdunia
webdunia
webdunia

ಅನಂತಮೂರ್ತಿ ನಿಧನಕ್ಕೆ ಪಟಾಕಿ ಸಂಭ್ರಮ: ಪೊಲೀಸರಿಂದ ಕೇಸು ದಾಖಲು

ಅನಂತಮೂರ್ತಿ ನಿಧನಕ್ಕೆ ಪಟಾಕಿ ಸಂಭ್ರಮ: ಪೊಲೀಸರಿಂದ ಕೇಸು ದಾಖಲು
, ಶನಿವಾರ, 23 ಆಗಸ್ಟ್ 2014 (15:29 IST)
ಖ್ಯಾತ ಸಾಹಿತಿ ಅನಂತಮೂರ್ತಿ ನಿಧನಕ್ಕೆ ಪಟಾಕಿ ಸಿಡಿಸುವ ಮೂಲಕ ಸಂಭ್ರಮಿಸಿದ ಬಿಜೆಪಿ ಮತ್ತು ಹಿಂದು ಜಾಗರಣ ವೇದಿಕೆ ಕಾರ್ಯಕರ್ತರ ವಿರುದ್ದ ಪೊಲೀಸರು ಕೇಸ್ ದಾಖಲು ಮಾಡಿದ್ದಾರೆ. ಚಿಕ್ಕಮಗಳೂರಿನ ಮೂಡಿಗೆರೆ ಪೊಲೀಸರು ಕೆಲವು ಅಪರಿಚಿತ ಬಿಜೆಪಿ ಮತ್ತು ಹಿಂದು ಜಾಗರಣ ವೇದಿಕೆ ಕಾರ್ಯಕರ್ತರ ವಿರುದ್ಧ ಐಪಿಸಿ ಸೆಕ್ಷನ್‌ಗಳ  ಅಡಿಯಲ್ಲಿ ಕೇಸು ದಾಖಲಿಸಿದರು.

ಈ ಘಟನೆಯ ವಿಡಿಯೋ ದೃಶ್ಯ ಮತ್ತು ಛಾಯಚಿತ್ರಗಳು ತಮ್ಮ ಬಳಿಯಿದ್ದು ಕಿಡಿಗೇಡಿಗಳನ್ನು ಹಿಡಿಯುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಮಂಗಳೂರಿನ ನಾಲ್ಕು ಕಡೆಗಳಲ್ಲಿ ಮತ್ತು ಚಿಕ್ಕಮಗಳೂರಿನ ಒಂದು ಕಡೆ ಅನಂತಮೂರ್ತಿ ಮೃತರಾದ ಸುದ್ದಿ ಹೊರಬೀಳುತ್ತಿದ್ದಂತೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು.

ಬಿಜೆಪಿ ವಿರೋಧಿ ನಿಲುವನ್ನು ಹೊಂದಿದ್ದ ಅನಂತಮೂರ್ತಿ ಮೋದಿ ಪ್ರಧಾನಿಯಾದರೆ ದೇಶ ಬಿಡುವುದಾಗಿ ತಿಳಿಸಿದ್ದರು. 

 

Share this Story:

Follow Webdunia kannada