Webdunia - Bharat's app for daily news and videos

Install App

ಪೋಷಕರಿಗೆ, ಜನರಿಗೆ ವಂಚಿಸಿದ ನಕಲಿ ಮಹಿಳಾ ಪೊಲೀಸ್ ಬಂಧನ

Webdunia
ಗುರುವಾರ, 22 ಮೇ 2014 (18:09 IST)
ಭದ್ರಾವತಿಯ ನಿವಾಸಿ ದೀಪಾ ಎಂಬ ಯುವತಿಯನ್ನು ವಂಚನೆ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆ ಭದ್ರಾವತಿಯ ದೀಪಾ ಪೊಲೀಸ್ ಕೆಲಸ ಸಿಕ್ಕಿರುವುದಾಗಿ ಹೇಳಿ ತಂದೆ ಪುಟ್ಟೆಗೌಡ,ತಾಯಿ ಭಾಗ್ಯಮ್ಮ ಎಂಬರಿಗೆ ವಂಚಿಸಿ, ಒಂದೂವರೆ ಲಕ್ಷ ರೂ. ಪಂಗನಾಮ ಹಾಕಿದ್ದಳು.

ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದ ದೀಪಾ ತಂದೆ, ತಾಯಿಗಳಿಂದ ಎನ್‌ಸಿಸಿಗೆ ಸೇರುವುದಾಗಿ 5000 ರೂ. ತೆಗೆದುಕೊಂಡು ಮೈಸೂರಿಗೆ ಹೋಗಿ ನಾಲ್ಕು ದಿನಗಳ ನಂತರ ವಾಪಸು ಬಂದಿದ್ದಳು.ನಂತರ ಪೊಲೀಸ್ ಕೆಲಸ ಸಿಕ್ಕಿದೆಯೆಂದೂ, ಇಲಾಖೆಗೆ ಹಣ ಕೊಡಬೇಕೆಂದೂ ಹೇಳಿ ಸುಮಾರು ಒಂದೂವರೆ ಲಕ್ಷ ಹಣವನ್ನು ತೆಗೆದುಕೊಂಡು ತಂದೆ, ತಾಯಿಗಳಿಗೆ ವಂಚಿಸಿದ್ದಳು.

 ಇದಲ್ಲದೇ ಊರಿನ ಕೆಲವು ಜನರ ಬಳಿಯೂ ತಾನು ಪೊಲೀಸ್ ಎಂದು ಹೇಳಿ ಹಣ ತೆಗೆದುಕೊಂಡು ವಂಚಿಸಿದ್ದಳು.  ಈ ಹಿನ್ನೆಲೆಯಲ್ಲಿ ದೀಪಾಳನ್ನು ಮತ್ತು ಅವಳ ಗೆಳೆಯ ಆಟೋ ಚಾಲಕ  ಸುರೇಶ್ ಎಂಬವನನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments