Webdunia - Bharat's app for daily news and videos

Install App

ಪತಿಯ ಕೊಲೆಗೆ ಸುಪಾರಿ ನೀಡಿದ್ದ ಪತ್ನಿಯ ಬಂಧನ

Webdunia
ಭಾನುವಾರ, 27 ಜುಲೈ 2014 (14:33 IST)
ಪತಿಯ ಜತೆಗಿನ ಮನಸ್ಪಾಪದ ಕಾರಣಕ್ಕೆ, ಆತನ ಹತ್ಯೆಗೆ ಸುಪಾರಿ ನೀಡಿದ್ದ ಪತ್ನಿಯನ್ನು ಬಂಧಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ. ಜತೆಗೆ ಆಕೆಯ ಗಂಡನನ್ನು ಕೊಲೆಗೈದ ನಾಲ್ವರು ಅಪರಾಧಿಗಳನ್ನು ಕೂಡ ಬಂಧಿಸಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ. 

ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ನೊಣವಿನಕೆರೆ ಗ್ರಾಮದ ಹೊರವಲಯದಲ್ಲಿ ಕವಿತಾ ಪತಿ 44 ವರ್ಷದ ಪುಟ್ಟರಾಜು  ಜುಲೈ 23  ರಂದು ಶವವಾಗಿ ಪತ್ತೆಯಾಗಿದ್ದ. 
 
36 ವರ್ಷದ ಕವಿತಾ ಎಂಬಾಕೆಯೇ ಬಂಧಿತ ಆರೋಪಿಯಾಗಿದ್ದು, ತನ್ನ ಗಂಡನನ್ನು ಕೊಲೆಗೈಯ್ಯುವಂತೆ ಆಕೆ ನಾಲ್ಕು ಜನ ಯುವಕರಿಗೆ ಸುಪಾರಿ ನೀಡಿದ್ದಳು. ಅದಕ್ಕೆ ಪ್ರತಿಯಾಗಿ ಆಕೆ ಅವರಿಗೆ 15,000 ರೂಪಾಯಿ ಹಣವನ್ನು ನೀಡಿದ್ದಳು. 
 
ಅದರಂತೆ ಜುಲೈ 23 ರಂದು ರವಿ, ಮೋಹನ್, ಭೈರೇಶ್, ಲೋಕೇಶ್ ಅಲಿಯಾಸ್ ಚಿನ್ನು ಎಂಬುವವರು ಪುಟ್ಟರಾಜುವನ್ನು  ರಾಡಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆಗೈದಿದ್ದರು. 
 
ನೊಣವಿನಕೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments