Select Your Language

Notifications

webdunia
webdunia
webdunia
webdunia

ಪತಿಯ ಕೊಲೆಗೆ ಸುಪಾರಿ ನೀಡಿದ್ದ ಪತ್ನಿಯ ಬಂಧನ

ಪತಿಯ ಕೊಲೆಗೆ ಸುಪಾರಿ ನೀಡಿದ್ದ ಪತ್ನಿಯ ಬಂಧನ
ತುಮಕೂರು , ಭಾನುವಾರ, 27 ಜುಲೈ 2014 (14:33 IST)
ಪತಿಯ ಜತೆಗಿನ ಮನಸ್ಪಾಪದ ಕಾರಣಕ್ಕೆ, ಆತನ ಹತ್ಯೆಗೆ ಸುಪಾರಿ ನೀಡಿದ್ದ ಪತ್ನಿಯನ್ನು ಬಂಧಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ. ಜತೆಗೆ ಆಕೆಯ ಗಂಡನನ್ನು ಕೊಲೆಗೈದ ನಾಲ್ವರು ಅಪರಾಧಿಗಳನ್ನು ಕೂಡ ಬಂಧಿಸಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ. 

ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ನೊಣವಿನಕೆರೆ ಗ್ರಾಮದ ಹೊರವಲಯದಲ್ಲಿ ಕವಿತಾ ಪತಿ 44 ವರ್ಷದ ಪುಟ್ಟರಾಜು  ಜುಲೈ 23  ರಂದು ಶವವಾಗಿ ಪತ್ತೆಯಾಗಿದ್ದ. 
 
36 ವರ್ಷದ ಕವಿತಾ ಎಂಬಾಕೆಯೇ ಬಂಧಿತ ಆರೋಪಿಯಾಗಿದ್ದು, ತನ್ನ ಗಂಡನನ್ನು ಕೊಲೆಗೈಯ್ಯುವಂತೆ ಆಕೆ ನಾಲ್ಕು ಜನ ಯುವಕರಿಗೆ ಸುಪಾರಿ ನೀಡಿದ್ದಳು. ಅದಕ್ಕೆ ಪ್ರತಿಯಾಗಿ ಆಕೆ ಅವರಿಗೆ 15,000 ರೂಪಾಯಿ ಹಣವನ್ನು ನೀಡಿದ್ದಳು. 
 
ಅದರಂತೆ ಜುಲೈ 23 ರಂದು ರವಿ, ಮೋಹನ್, ಭೈರೇಶ್, ಲೋಕೇಶ್ ಅಲಿಯಾಸ್ ಚಿನ್ನು ಎಂಬುವವರು ಪುಟ್ಟರಾಜುವನ್ನು  ರಾಡಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆಗೈದಿದ್ದರು. 
 
ನೊಣವಿನಕೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

Share this Story:

Follow Webdunia kannada