ನಗರದ ಮಾರ್ಕೆಟ್ ನಲ್ಲಿ ಪ್ಲಾಸ್ಟಿಕ್ ಬೀಳ್ತಿಲ್ಲ ಬ್ರೇಕ್

Webdunia
ಬುಧವಾರ, 27 ಜುಲೈ 2022 (19:15 IST)
ಪ್ಲಾಸ್ಟಿಕ್ ಬಳಸದಂತೆ ಸರ್ಕಾರದ ಆದೇಶವಿದ್ರು ಅದನ್ನೇಲ್ಲ ಧಿಕಾರಿಸಿ ನಗರದಲ್ಲಿ ಪ್ಲಾಸ್ಟಿಕ್ ಉಪಯೋಗಿಸಲಾಗ್ತಿದೆ. ಸಣ್ಣಪುಟ್ಟ ಅಂಗಳಿಗಳಿಂದ ದೊಡ್ಡ ಅಂಗಡಿಗಳವರೆಗೂ ಪ್ಲಾಸ್ಟಿಕ್ ಯಥೇಚ್ಛವಾಗಿ ಬಳಸಲಾಗ್ತಿದೆ. ಇನ್ನು ಸರ್ಕಾರದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲದಂತಾಗಿದೆ.ಸಣ್ಣಪುಟ್ಟ ಅಂಗಡಿಗಳು ಸೇರಿದಂತೆ ಬೇಕರಿ , ದಿನಸಿ ಅಂಗಡಿ ಎಲ್ಲ ಕಡೆಯೂ ಪ್ಲಾಸ್ಟಿಕ್ ಕವರ್ ಗಳು ರಾರಾಜಿಸುತ್ತಿದೆ. ಕೆಲವೊಂದು ಭಾಗಗಳಲ್ಲಿ ಸ್ವತಃ ಮಾರ್ಷಲ್ ಗಳು ಫೀಲ್ಡ್ ಗಿಳಿದು ಪರಿಶೀಲನೆ ಮಾಡಿದಾಗ ಪ್ಲಾಸ್ಟಿಕ್ ಯಥೇಚ್ಛವಾಗಿ ಸಿಕ್ಕಿದೆ. ಅದ‌ನ್ನ ವಶಪಡಿಸಿಕೊಂಡು ದಂಡ ಹಾಕಲು ಮುಂದಾಗಿದ್ದಾರೆ. ಅಷ್ಟೇ ಕೆಲವೊಂದು  ಹೊಟೇಲ್ ಗಳಲ್ಲಿ ಪ್ಲಾಸ್ಟಿಕ್ ಕವರ್ ನಲ್ಲಿ ಪರ್ಸಲ್ ಮಾಡಿಕೊಡ್ತಾರೆ.
 
ಇನ್ನು ಅಂಗಡಿಗಳಲ್ಲಿ ಮಾರಾಟಗಾರರನ್ನ ಯಾಕೆ ಪ್ಲಾಸ್ಟಿಕ್ ನಿಷೇಧವಿದ್ರು ಉಪಯೋಗಿಸ್ತೀರಾ ಅಂತಾ ಕೇಳಿದ್ರೆ ಜನರಿಗೆ ಯಾವುದರಲ್ಲಿ ಹಾಕಿ ಕೊಡೋಣ್ಣ ಅಂತಾರೆ. ಇನ್ನು ಪ್ಲಾಸ್ಟಿಕ್ ಕವರ್ ಬದಲಿಗೆ ಬಟ್ಟೆ ಬ್ಯಾಗ್ ಗಳಲ್ಲಿ ಕೆಲವೊಂದು ಪದಾರ್ಥಗಳನ್ನ ಹಾಕಿಕೊಡ್ತಾರೆ.ಆದ್ರೆ ಪ್ಲಾಸ್ಟಿಕ್ ಗಿಂತ ಬಟ್ಟೆ ಕವರ್ ಬೆಲೆ ಜಾಸ್ತಿ.ಹೀಗಾಗಿ ಜನರು ತೆಗೆದುಕೊಳ್ಳಲು ಹಿಂದೆ- ಮುಂದೆ ನೋಡ್ತಾರೆ.ಇನ್ನು 10 ಕೆಜಿ ಮೇಲ್ಪಟ್ಟ ಐಟಂ ತಗೊಂಡ್ರೆ ಪ್ಲಾಸ್ಟಿಕ್ ಕವರ್ ಕೊಡಲೇಬೇಕು .ಇಲ್ಲವಾದರೆ ಜನರು ಗಲಾಟೆ ಮಾಡ್ತಾರೆ ಅಂತಾ ಅಂಗಡಿಯವರು ಪ್ರತಿಕ್ರಿಯಿಸುತ್ತಾರೆ. ಪ್ಲಾಸ್ಟಿಕ್ ನಿಷೇಧವಿದ್ರು ಅಂಗಡಿ- ಮುಂಗಟ್ಟುಗಳಲ್ಲಿ ರಾಜರೋಷವಾಗಿ ಪ್ಲಾಸ್ಟಿಕ್ ಉಪಯೋಗಿಸ್ತಿದ್ದಾರೆ. ಹೀಗಾದ್ರೆ ಪರಿಸರಕ್ಕೆ ಇನ್ನಷ್ಟು ಹಾನಿಯಾಗುತ್ತೆ. 
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜವಂಶಸ್ಥ, ಸಂಸದ ಯದುವೀರ್ ಅವರ ಅಜ್ಜ ಮದನ್ ಗೋಪಾಲ್ ಇನ್ನಿಲ್ಲ

ಸಿಎಂ ಕುರ್ಚಿ ರೇಸ್‌ನಲ್ಲಿ ನೀವಿದ್ದೀರಾ ಎಂದಿದ್ದಕ್ಕೆ ಪರಮೇಶ್ವರ್ ಪ್ರತಿಕ್ರಿಯೆ ಹೀಗಿತ್ತು

ಇಟಲಿ ಟೆಂಪಲ್ ಸುತ್ತಿ ಕಪ್ಪ ಒಪ್ಪಿಸಿದರೆ ಡಿಕೆ ಶಿವಕುಮಾರ್ ಸಿಎಂ: ಆರ್ ಅಶೋಕ

ಲೋಕಾನುಭವವಿರುವ ಸಿದ್ದರಾಮಯ್ಯರಿಗೆ ಇದು ತಿಳಿದಿಲ್ವ: ತೇಜಸ್ವಿ ಸೂರ್ಯ ಪ್ರಶ್ನೆ

ಕರ್ನಾಟಕದ ಜನತೆಗೆ ಗುಡ್‌ನ್ಯೂಸ್‌, ಬೆಂಗಳೂರು ಮುಂಬೈ ಸೂಪರ್ ಫಾಸ್ಟ್ ರೈಲಿಗೆ ಗ್ರೀನ್ ಸಿಗ್ನಲ್

ಮುಂದಿನ ಸುದ್ದಿ
Show comments