Webdunia - Bharat's app for daily news and videos

Install App

ಹಂದಿ ಸಾಕುವ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಫೋಟೋಗ್ರಾಫರ್

Webdunia
ಶನಿವಾರ, 28 ಮೇ 2016 (16:20 IST)
ಫೋಟೋಗ್ರಾಫರ್ ಒಬ್ಬನಿಂದ ಹಂದಿ ಸಾಕಾಣಿಕೆ ಮಾಡುವ ಮಹಿಳೆ ಮೇಲೆ ಅತ್ಯಾಚಾರ ಪ್ರಯತ್ನ ನಡೆದಿರುವಂತಹ ಹೇಯ ಕೃತ್ಯ ಮಡ್ಯ ಜಿಲ್ಲೆಯ ಪಾಂಡವಪುರದಲ್ಲಿ ನಡೆದಿದೆ.
 
ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಹಂದಿ ಸಾಕಾಣಿಕೆ ಮಾಡಿ ಜೀವನ ಸಾಗಿಸುತ್ತಿದ್ದ ಮಹಿಳೆಯ ಮೇಲೆ ಶಿವಮೊಗ್ಗ ಜಿಲ್ಲೆಯ ಫೋಟೋಗ್ರಾಫರ್ ಗುಣಶೇಖರ್ ಎಂಬ ಕಾಮುಕ ಅತ್ಯಾಚಾರವೆಸಗಲು ಪ್ರಯತ್ನಪಟ್ಟಿದ್ದಾನೆ. ಸಂತ್ರಸ್ಥೆಯ ಗುಡಿಸಲಿನ ಬಳಿ ಕಾಮುಕ ಗುಣಶೇಖರ್‌ನ ವ್ಯಾಲೇಟ್ ಪತ್ತೆಯಾಗಿದೆ. ಈ ವ್ಯಾಲೇಟ್‌ನಲ್ಲಿ ಕಾಮುಕನ ಪ್ರಮುಖ ದಾಖಲೆಗಳು ಲಭ್ಯವಾಗಿದೆ. ಸಂತ್ರಸ್ಥೆ ಮಹಿಳೆ ದಾಖಲೆ ಸಮೇತ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ಹೋದರೆ, ಘಟನಾ ಸ್ಥಳ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿ ಪೊಲೀಸರು ದೂರು ಸ್ವೀಕರಿಸುವಲ್ಲಿ ನಿರ್ಲಕ್ಷ ತೊರಿದ್ದಾರೆ.
 
ಇಂತ ಪೈಶಾಚಿಕ ಕೃತ್ಯದಿಂದ ಬೇಸತ್ತ ಮಹಿಳೆ, ಮಂಡ್ಯ ಜಿಲ್ಲೆಯ ಡಿಸಿ ಕಛೇರಿಯ ಬಳಿ ತೆರಳಿ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ್ ಅವರನ್ನು ಭೇಟಿ ಮಾಡಿ ತನ್ನ ಅಳಲನ್ನು ತೊಡಿಕೊಂಡಿದ್ದಾಳೆ.
 
ಮಹಿಳೆ ನೀಡಿರುವ ವಿವರಣೆ ಕೇಳಿ ಬೆಚ್ಚಿಬಿದ್ದ ಮಂಜುಳಾ ಮಾನಸ್, ತಕ್ಷಣವೇ ಶ್ರೀರಂಗಪಟ್ಟಣ ಡೈವೈಎಸ್‌ಪಿ ಅವರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು. ಈ ಕುರಿತು ತಕ್ಷಣ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.


ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments