ಫೋಟೋಗ್ರಾಫರ್ ಒಬ್ಬನಿಂದ ಹಂದಿ ಸಾಕಾಣಿಕೆ ಮಾಡುವ ಮಹಿಳೆ ಮೇಲೆ ಅತ್ಯಾಚಾರ ಪ್ರಯತ್ನ ನಡೆದಿರುವಂತಹ ಹೇಯ ಕೃತ್ಯ ಮಡ್ಯ ಜಿಲ್ಲೆಯ ಪಾಂಡವಪುರದಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಹಂದಿ ಸಾಕಾಣಿಕೆ ಮಾಡಿ ಜೀವನ ಸಾಗಿಸುತ್ತಿದ್ದ ಮಹಿಳೆಯ ಮೇಲೆ ಶಿವಮೊಗ್ಗ ಜಿಲ್ಲೆಯ ಫೋಟೋಗ್ರಾಫರ್ ಗುಣಶೇಖರ್ ಎಂಬ ಕಾಮುಕ ಅತ್ಯಾಚಾರವೆಸಗಲು ಪ್ರಯತ್ನಪಟ್ಟಿದ್ದಾನೆ. ಸಂತ್ರಸ್ಥೆಯ ಗುಡಿಸಲಿನ ಬಳಿ ಕಾಮುಕ ಗುಣಶೇಖರ್ನ ವ್ಯಾಲೇಟ್ ಪತ್ತೆಯಾಗಿದೆ. ಈ ವ್ಯಾಲೇಟ್ನಲ್ಲಿ ಕಾಮುಕನ ಪ್ರಮುಖ ದಾಖಲೆಗಳು ಲಭ್ಯವಾಗಿದೆ. ಸಂತ್ರಸ್ಥೆ ಮಹಿಳೆ ದಾಖಲೆ ಸಮೇತ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ಹೋದರೆ, ಘಟನಾ ಸ್ಥಳ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿ ಪೊಲೀಸರು ದೂರು ಸ್ವೀಕರಿಸುವಲ್ಲಿ ನಿರ್ಲಕ್ಷ ತೊರಿದ್ದಾರೆ.
ಇಂತ ಪೈಶಾಚಿಕ ಕೃತ್ಯದಿಂದ ಬೇಸತ್ತ ಮಹಿಳೆ, ಮಂಡ್ಯ ಜಿಲ್ಲೆಯ ಡಿಸಿ ಕಛೇರಿಯ ಬಳಿ ತೆರಳಿ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ್ ಅವರನ್ನು ಭೇಟಿ ಮಾಡಿ ತನ್ನ ಅಳಲನ್ನು ತೊಡಿಕೊಂಡಿದ್ದಾಳೆ.
ಮಹಿಳೆ ನೀಡಿರುವ ವಿವರಣೆ ಕೇಳಿ ಬೆಚ್ಚಿಬಿದ್ದ ಮಂಜುಳಾ ಮಾನಸ್, ತಕ್ಷಣವೇ ಶ್ರೀರಂಗಪಟ್ಟಣ ಡೈವೈಎಸ್ಪಿ ಅವರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು. ಈ ಕುರಿತು ತಕ್ಷಣ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ವೆಬ್ದುನಿಯಾ ಮೊಬೈಲ್ ಆಪ್ (ಡೌನ್ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.