Select Your Language

Notifications

webdunia
webdunia
webdunia
webdunia

ಅಸಹಿಷ್ಣುತೆ: ರಾಷ್ಟ್ರಮಟ್ಟದ ಚರ್ಚೆಗೆ ಕರೆಕೊಟ್ಟ ಪೇಜಾವರಶ್ರೀ

ಅಸಹಿಷ್ಣುತೆ: ರಾಷ್ಟ್ರಮಟ್ಟದ ಚರ್ಚೆಗೆ ಕರೆಕೊಟ್ಟ ಪೇಜಾವರಶ್ರೀ
ಬಳ್ಳಾರಿ , ಬುಧವಾರ, 18 ನವೆಂಬರ್ 2015 (16:20 IST)
ಉಡುಪಿಯ ಪೇಜಾವರ ಮಠಾಥೀಶರಾದ ಶ್ರೀ ವಿಶ್ವೇಶ ತೀರ್ಥರು ದೇಶದಲ್ಲಿ ನಡೆಯುತ್ತಿರುವ ಅಸಹಿಷ್ಣುತೆ ವಿವಾದಕ್ಕೆ ಸಂಬಂಧಿಸಿದಂತೆ ರಾಷ್ಟ್ರ ಮಟ್ಟದ ಚರ್ಚೆಯನ್ನು ಕರೆದಿದ್ದಾರೆ. 

 
ಬಳ್ಳಾರಿಯಲ್ಲಿ  ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ‘ಎಲ್ಲ ಸಮುದಾಯಗಳು ಅಸಹಿಷ್ಣುತೆಗೆ ಸಂಬಂಧಿಸಿದ ತೊಂದರೆಗಳನ್ನು ಎದುರಿಸುತ್ತಿದ್ದಾರೆ.  ಆದರೆ ಒಂದೇ ಸಮುದಾಯವನ್ನು ಗುರಿಯನ್ನಾಗಿಸಿಕೊಂಡು ವಿವಾದವನ್ನು ಪ್ರಾರಂಭಿಸಲಾಗಿದೆ. ಈ ವಿಷಯದ ಮೇಲೆ ರಾಷ್ಟ್ರ ಮಟ್ಟದ ಚರ್ಚೆಯಾಗಬೇಕು', ಎಂದರು. 
 
'ಪ್ರಮುಖ ರಾಜಕೀಯ ಪಕ್ಷಗಳು ಈ ಸಮಸ್ಯೆಯ ಲಾಭ ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅದು ಸಮಸ್ಯೆಗೆ ಪರಿಹಾರವಲ್ಲ. ಎಲ್ಲ ಪಕ್ಷದ ಮುಖಂಡರು  ಅಸಹಿಷ್ಣುತೆಯ ವಿರುದ್ಧ ಒಕ್ಕೊರಲಿನ ನಿಲುವನ್ನು ತೆಗೆದುಕೊಳ್ಳಬೇಕು,' ಎಂದು ಶ್ರೀಗಳು ಹೇಳಿದ್ದಾರೆ. 

Share this Story:

Follow Webdunia kannada