Select Your Language

Notifications

webdunia
webdunia
webdunia
webdunia

ಅತಿವೃಷ್ಟಿಪೀಡಿತ ಜನರಿಗೆ ಪರಿಹಾರ ನೀಡಿ: ಹಾಲಿ ಸಿಎಂಗೆ ಮಾಜಿ ಸಿಎಂ ಪತ್ರ

ಅತಿವೃಷ್ಟಿಪೀಡಿತ ಜನರಿಗೆ ಪರಿಹಾರ ನೀಡಿ: ಹಾಲಿ ಸಿಎಂಗೆ ಮಾಜಿ ಸಿಎಂ ಪತ್ರ
ಬೆಂಗಳೂರು , ಗುರುವಾರ, 18 ಸೆಪ್ಟಂಬರ್ 2014 (15:59 IST)
ರಾಜ್ಯದಲ್ಲಿ ಅತಿವೃಷ್ಟಿ, ಅನಾವೃಷ್ಟಿಯಿಂದ ನೊಂದ ಜನರಿಗೆ ಪರಿಹಾರ ನೀಡುವಂತೆ ಹಾಲಿ ಸಿಎಂ ಸಿದ್ದರಾಮಯ್ಯ  ಅವರಿಗೆ ಮಾಜಿ ಸಿಎಂ ಕುಮಾರಸ್ವಾಮಿ ಪತ್ರ ಬರೆದಿದ್ದಾರೆ.

ಅತಿವೃಷ್ಟಿ ಪ್ರದೇಶಗಳಲ್ಲಿ ಎಕರೆಗೆ 20,000 ರೂ. ಪರಿಹಾರ ನೀಡಿ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ವೈಜ್ಞಾನಿಕ ಬೆಲೆ ನೀಡುವ ಭರವಸೆ ಹುಸಿಯಾಗಿದೆ. ಉ.ಕರ್ನಾಟಕಕ್ಕೆ ವಿಶೇಷ ಪ್ಯಾಕೇಜ್ ನೀಡುವಂತೆ ಅವರು ಒತ್ತಾಯಿಸಿದರು. ಬೆಂಗಳೂರಿನಲ್ಲಿ ಕೆರೆ ಒತ್ತುವರಿ ಬಗ್ಗೆ ಅಧಿವೇಶನದಲ್ಲಿ ತಿಳಿಸಿದ್ದೆ.

ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಮನೆಹಾನಿ ಪರಿಹಾರ ಮೊತ್ತ 50,000ಕ್ಕೆ ಹೆಚ್ಚಿಸಬೇಕು. ನೆರೆಹಾನಿ ಜಿಲ್ಲೆಗಳಿಗೆ 5000 ಕೋಟಿ ಪ್ಯಾಕೇಜ್ ನೀಡಿ ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ. 

Share this Story:

Follow Webdunia kannada