Select Your Language

Notifications

webdunia
webdunia
webdunia
webdunia

ಆಪ್ತರ ಹೆಸರಿನಲ್ಲಿ ಪರಮೇಶ್ವರ್ ನಾಯ್ಕ್ 24 ಎಕರೆ ಭೂಖರೀದಿ ಆರೋಪ

ಆಪ್ತರ ಹೆಸರಿನಲ್ಲಿ ಪರಮೇಶ್ವರ್ ನಾಯ್ಕ್ 24 ಎಕರೆ ಭೂಖರೀದಿ ಆರೋಪ
ಕೂಡ್ಲಿಗಿ: , ಮಂಗಳವಾರ, 2 ಫೆಬ್ರವರಿ 2016 (16:50 IST)
ಬಳ್ಳಾರಿ ಡಿವೈಎಸ್‌ಪಿ ಅನುಪಮ ಶೆಣೈ ಅವರನ್ನು ವರ್ಗಾವಣೆ ಮಾಡಿಸಿದ ಆರೋಪ ಹೊತ್ತು ವಿವಾದಕ್ಕೆ ಗುರಿಯಾದ ಬೆನ್ನಲ್ಲೇ ಪರಮೇಶ್ವರ ನಾಯ್ಕ್ ಮತ್ತೊಂದು ಬಾನಗಡಿ ಬಯಲಾಗಿದೆ.ಅನುಪಮಾ ಶೆಣೈ ವರ್ಗಾವಣೆ ಬೆನ್ನಲ್ಲೇ ಬೇನಾಮಿ ಭೂತ ಅವರನ್ನು ಬೆನ್ನೆತ್ತಿದೆ.

 ಪರಮೇಶ್ವರ ನಾಯ್ಕ ವಿರುದ್ಧ ಆಪ್ತರ ಹೆಸರಿನಲ್ಲಿ ಭೂಮಿ ಖರೀದಿಸಿದ ಆರೋಪ ಮಾಡಲಾಗಿದೆ.  ಅವರ ಆಪ್ತ ಚಂದ್ರನಾಯ್ಕ್ ಪತ್ನಿ ಮಂಜುಳಾ ಹೆಸರಲ್ಲಿ ನಾಯ್ಕ್ ಭೂಮಿ ಖರೀದಿಸಿದ್ದಾರೆಂದು ಆರೋಪಿಸಲಾಗಿದೆ.

2015ರ ಮೇನ ಲ್ಲಿ ಹಗರಿಬೊಮ್ಮನಹಳ್ಳಿ ತಾಲೂಕು ಹಂಪಸಾಗರ ಬಳಿ 24 ಎಕರೆ ಭೂಮಿಯನ್ನು ಪರಮೇಶ್ವರ ನಾಯ್ಕ್ ಖರೀದಿಸಿದ್ದರು. ಆದರೆ ಈ ಭೂಮಿಯನ್ನು ಅವರ ಹೆಸರಿನಲ್ಲಿ ಖರೀದಿಸದೇ ಮಂಜುಳಾ ಅವರ ಹೆಸರಿನಲ್ಲಿ ಖರೀದಿಸಿರುವುದು ವಿವಾದಕ್ಕೆ ಗುರಿಯಾಗಿದೆ.  ಡಿವೈಎಸ್ಪಿ  ಅನುಪಮಾ ಶೆಣೈ ವರ್ಗಾವಣೆ ರದ್ದಾಗಿ ಪುನಃ ಕೂಡ್ಲಿಗಿಯಲ್ಲಿ ನಿಯೋಜನೆಯಾದ ಮೇಲೆ ಪರಮೇಶ್ವರ್ ನಾಯ್ಕ್ ವಿರುದ್ದ ಒಂದರ ಹಿಂದೊಂದು ಆರೋಪಗಳು ಕೇಳಿಬರುತ್ತಿದೆ. 

Share this Story:

Follow Webdunia kannada