Select Your Language

Notifications

webdunia
webdunia
webdunia
webdunia

ಅಳಿಯನ ಮನೆಯೆದುರೇ ಪುತ್ರಿಯ ಶವಸಂಸ್ಕಾರ ಮಾಡಿದ ಪೋಷಕರು

ಅಳಿಯನ ಮನೆಯೆದುರೇ ಪುತ್ರಿಯ ಶವಸಂಸ್ಕಾರ ಮಾಡಿದ ಪೋಷಕರು
ಕೊಳ್ಳೆಗಾಲ , ಬುಧವಾರ, 18 ನವೆಂಬರ್ 2015 (13:35 IST)
ಕೊಳ್ಳೆಗಾಲ ತಾಲೂಕಿನ ಆರ್. ಎಸ್. ದೊಡ್ಡಿ ಗ್ರಾಮದಲ್ಲಿ ಅಳಿಯನ ಮನೆಯ ಎದುರೇ ಮಗಳ ಮೃತದೇಹವನ್ನು ಪೋಷಕರು ಮಣ್ಣು ಮಾಡಿರುವ ಘಟನೆ ನಡೆದಿದೆ.  3 ವರ್ಷದ ಹಿಂದೆ ಪಲ್ಲವಿ ಮಹೇಶ್‌ನನ್ನು ವಿವಾಹವಾಗಿದ್ದಳು.  ಪಲ್ಲವಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಬಳಿಕ ಇದನ್ನು ಕೊಲೆಯೆಂದೇ ಪಲ್ಲವಿ ತಂದೆ, ತಾಯಿ ತೀರ್ಮಾನಿಸಿದ್ದರು.

 ಪಲ್ಲವಿಗೆ ಮಕ್ಕಳಿಲ್ಲವೆಂಬ ಕಾರಣದಿಂದ ಪತಿ ಮನೆಯವರು ಕಿರುಕುಳ ನೀಡುತ್ತಿದ್ದರೆಂದು ಹೇಳಲಾಗಿದೆ. ಕಳೆದ ಮೂರು ದಿನಗಳ ಹಿಂದೆ ಪಲ್ಲವಿ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರಿಂದ ನೊಂದ ಪಲ್ಲವಿ ತಂದೆ, ತಾಯಿಗಳು ಪತಿ ಮತ್ತು ಅವರ ಕುಟುಂಬದ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.

 ಆದರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಅಷ್ಟರಲ್ಲಿ ಮಹೇಶ್ ಮತ್ತು ಅವನ ಕುಟುಂಬ ಮನೆ ಬಿಟ್ಟು ನಾಪತ್ತೆಯಾಗಿದ್ದರಿಂದ ನೊಂದ ಪಲ್ಲವಿ ಪೋಷಕರು ಪಲ್ಲವಿಯ ಶವವನ್ನು ಪತಿಯ ಮನೆಯೆದುರು ಹೂಳಿ ಶವಸಂಸ್ಕಾರ ಮಾಡಿದ್ದಾರೆ. 

Share this Story:

Follow Webdunia kannada