Select Your Language

Notifications

webdunia
webdunia
webdunia
webdunia

ಪರಮೇಶ್ವರ್ ಸಿಎಂ ಆಗಲೇಬೇಕು: ದಲಿತ ಮುಖಂಡರ ಒತ್ತಾಯ

ಪರಮೇಶ್ವರ್ ಸಿಎಂ ಆಗಲೇಬೇಕು: ದಲಿತ ಮುಖಂಡರ ಒತ್ತಾಯ
ಬೆಂಗಳೂರು , ಮಂಗಳವಾರ, 17 ಫೆಬ್ರವರಿ 2015 (12:43 IST)
ರಾಜ್ಯ ಕಾಂಗ್ರೆಸ್ ರಾಜಕೀಯದಲ್ಲಿ ಪರಮೇಶ್ವರ್ ಅವರ ಅಭಿಮಾನಿಗಳು ಸಂಚಲನವನ್ನುಂಟು ಮಾಡಲು ಮುಂದಾಗಿದ್ದು, ಡಾ.ಜಿ.ಪರಮೇಶ್ವರ್ ಅವರು ರಾಜ್ಯದ ಸಿಎಂ ಆಗಲೇಬೇಕೆಂದು ಪಟ್ಟು ಹಿಡಿದ್ದಾರೆ. 
 
ರಾಜ್ಯದ 15ಕ್ಕೂ ಹೆಚ್ಚು ದಲಿತ ಸಂಘಟನೆಗಳ ಮುಖಂಡರು ಇಂದು ನಗರದ ಏಟ್ರಿಯಾ ಹೋಟೆಲ್‌ನಲ್ಲಿ ಸಭೆ ಸೇರಿದ್ದು, ಸಭೆಯಲ್ಲಿ ದಲಿತ ಸಮುದಾಯದ ಕಾಂಗ್ರೆಸ್ ಮುಖಂಡ ಡಾ.ಜಿ ಪರಮೇಶ್ವರ್ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಲು ಕಾಂಗ್ರೆಸ್ ಸರ್ಕಾರ ಅವಕಾಶ ನೀಡಬೇಕು. ಅಲ್ಲದೆ ಪಕ್ಷದಲ್ಲಿ ಉನ್ನತ ಪದವಿಯಲ್ಲಿರುವ ಅವರು ಸಿಎಂ ಸ್ಥಾನಕ್ಕೆ ಅರ್ಹರಾಗಿದ್ದಾರೆ. ಆದ್ದರಿಂದ ಸಿಎಂ ಸಿದ್ದರಾಮಯ್ಯನವರು ಈ ಬಗ್ಗೆ ಕೂಡಲೇ ತಮ್ಮ ಅಧಿಕೃತ ನಿರ್ಧಾರವನ್ನು ಪ್ರಕಟಿಸಬೇಕು. ಅಲ್ಲದೆ ಸಿಎಂ ಅವರನ್ನು ಒತ್ತಾಯಿಸಬೇಕೆಂದು  ನಿರ್ಧಾರ ಕೈಗೊಂಡರು.  
 
ಇನ್ನು ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿರುವ ಮುಖಂಡರು, ಈ ಬಗ್ಗೆ ಸಿಎಂ ಸಿದ್ದಾಮಯ್ಯ ಅವರನ್ನು ಇಂದು ಮಧ್ಯಾಹ್ನ ಭೇಟಿ ಮಾಡಲಿದ್ದು, ಅವರಿಗೆ ಮನವಿ ಮೂಲಕ ಒತ್ತಾಯಿಸಲಿದ್ದೇವೆ. ಸರ್ಕಾರ ಈ ಬಗ್ಗೆ ಕೂಡಲೇ ನಿರ್ಧಾರ ಪ್ರಕಟಿಸಬೇಕು. ಇಲ್ಲವಾದಲ್ಲಿ ಸರ್ಕಾರದಲ್ಲಿನ ದಲಿತ ಸಚಿವರ ರಾಜೀನಾಮೆ ಪರ್ವ ಆರಂಭವಾಗಲಿದೆ ಎಂಬ ಎಚ್ಚರಿಕೆಯನ್ನು ರವಾನಿಸಿದರು. 
 
ಇನ್ನು ಪರಮೇಶ್ವರ್ ಇಂದು ಮಧ್ಯಾಹ್ನ 12.30ಕ್ಕೆ ದಲಿತ ಮುಖಂಡರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. 
 

Share this Story:

Follow Webdunia kannada