Select Your Language

Notifications

webdunia
webdunia
webdunia
webdunia

ಪರಮೇಶ್ವರ್ ನಾಯಕ್ ವಿರುದ್ಧ ಗುಡಕೋಟೆ ಆರ್‌ಎಫ್‌ಒ ದುದ್ದಗಿ ಎತ್ತಂಗಡಿ ಆರೋಪ

ಪರಮೇಶ್ವರ್ ನಾಯಕ್ ವಿರುದ್ಧ ಗುಡಕೋಟೆ ಆರ್‌ಎಫ್‌ಒ ದುದ್ದಗಿ ಎತ್ತಂಗಡಿ ಆರೋಪ
ಬಳ್ಳಾರಿ: , ಶುಕ್ರವಾರ, 29 ಜನವರಿ 2016 (17:27 IST)
ಡಿವೈಎಸ್‌ಪಿ ಅನುಪಮಾ ಶೆಣೈ ಎತ್ತಂಗಡಿ ಮಾಡಿಸಿದ್ದಾರೆಂಬ ಆರೋಪ ಹೊತ್ತಿರುವ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ್ ನಾಯಕ್ ವಿರುದ್ಧ ಮತ್ತೊಂದು ಎತ್ತಂಗಡಿ ಆರೋಪ ಕೇಳಿಬಂದಿದೆ. ಬಳ್ಳಾರಿಯ ಗುಡೇಕೋಟೆ ಆರ್‌ಎಫ್‌ಒ ದುದ್ದಗಿ ಅವರನ್ನು ಪರಮೇಶ್ವರ ನಾಯಕ್  ಎತ್ತಂಗಡಿ ಮಾಡಿಸಿರುವ  ಆರೋಪ ಕೇಳಿಬಂದಿದೆ. ಮರಳು ದಂಧೆಕೋರರ ಒತ್ತಡಕ್ಕೆ ಮಣಿದು ದುದ್ದಗಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರೆಂದು ಹೇಳಲಾಗುತ್ತಿದೆ.  

ಅಪರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಈ ಕುರಿತು ಮುಖ್ಯಕಾರ್ಯದರ್ಶಿಗೆ ಪತ್ರ ಬರೆದು ಸಚಿವರು ಕಿರುಕುಳ ನೀಡಿದ ಉಲ್ಲೇಖವನ್ನು ಮಾಡಿದ್ದಾರೆಂದು ತಿಳಿದುಬಂದಿದೆ. 
 ಈ ನಡುವೆ ಡಿವೈಎಸ್‌ಪಿ ಅನುಪಮಾ ಶೆಣೈ ವರ್ಗಾವಣೆಗೆ ಸಂಬಂಧಿಸಿದಂತೆ ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ಘಟಕವು ಪರಮೇಶ್ವರ್ ನಾಯಕ್ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದೆ.

ಪರಮೇಶ್ವರ್ ನಾಯಕ್ ವಿರುದ್ಧ ಘೋಷಣೆ ಕೂಗಿದ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.  ದಕ್ಷ ಮಹಿಳಾ ಅಧಿಕಾರಿಯನ್ನು ವರ್ಗಾವಣೆ ಮಾಡಿದ್ದು ಸರಿಯಲ್ಲಿ. ಈ ಕುರಿತು ಪರಮೇಶ್ವರ್ ನಾಯಕ್ ಕ್ಷಮೆ ಕೇಳಬೇಕು ಎಂದು ಮಹಿಳಾ ಘಟಕ ಒತ್ತಾಯಿಸಿತು. 
 

Share this Story:

Follow Webdunia kannada