Webdunia - Bharat's app for daily news and videos

Install App

ಸೋಲಿಗೆ ಪರಮೇಶ್ವರ್ ನಾಯ್ಕ ಕಾರಣ: ಅನಿಲ್ ಲಾಡ್

Webdunia
ಬುಧವಾರ, 24 ಫೆಬ್ರವರಿ 2016 (12:49 IST)
ಬಳ್ಳಾರಿಯಲ್ಲಿ ಕಾಂಗ್ರೆಸ್‌ಗೆ ಆದ ಹಿನ್ನೆಡೆಗೆ ಶಾಸಕ ಅನಿಲ್ ಲಾಡ್ ಸಚಿವ ಪಿ.ಟಿ. ಪರಮೇಶ್ವರ್ ನಾಯ್ಕ ಅವರನ್ನು ಹೊಣೆಗಾರರಾಗಿಸಿದ್ದಾರೆ. 
 
ಸೋಲಿಗೆ ಟಿಕೆಟ್ ಹಂಚಿಕೆಯಲ್ಲಾದ ಏಕಪಕ್ಷೀಯ ನಿರ್ಧಾರವೇ ಕಾರಣ ಎಂದು ಬಳ್ಳಾರಿ ನಗರ ಶಾಸಕ ಅನಿಲ್ ಲಾಡ್ ಕಿಡಿಕಾರಿದ್ದಾರೆ.
 
ಸಂಡೂರಿನಲ್ಲಿ ಮಾತನಾಡುತ್ತಿದ್ದ ಲಾಡ್, ಜಿಲ್ಲಾ ಉಸ್ತುವಾರಿ ಸಚಿವರಾದ ಪಿ. ಟಿ. ಪರಮೇಶ್ವರ ನಾಯ್ಕ ಶಾಸಕರ, ಮುಖಂಡರ ಮಾತಿಗೆ ಬೆಲೆ ಕೊಡದೆ ತಮಗೆ ಬೇಕಾದವರಿಗೆ ಟಿಕೆಟ್ ಹಂಚಿಕೆ ನೀಡಿದರು. ಹೀಗಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪರಿಣಾಮಕಾರಿ ಪ್ರದರ್ಶನ ನೀಡಲು ಸೋತಿದೆ ಎಂದು ಹೇಳಿದ್ದಾರೆ. 
 
ಇದು ನನ್ನೊಬ್ಬನ ನೋವಲ್ಲ. ಜಿಲ್ಲೆಯ ಎಲ್ಲರಿಗೂ ಇದರಿಂದ ನೋವಾಗಿದೆ. ಅವರು ನಮ್ಮ ಜಿಲ್ಲೆಯವರಲ್ಲ. ಮೊದಲು ಅವರನ್ನು ಬದಲಾವಣೆ ಮಾಡಲಿ. ಈ ಕುರಿತು ರಾಜ್ಯದ ವರಿಷ್ಟರು ಕ್ರಮ ಕೈಗೊಳ್ಳದಿದ್ದರೆ ನಾವು ಹೈಕಮಾಂಡ್ ಮೊರೆ ಹೋಗುತ್ತೇವೆ ಎಂದು ಲಾಡ್ ಗುಡುಗಿದ್ದಾರೆ. 
 
ಬಳ್ಳಾರಿ ಜಿಲ್ಲೆಯಲ್ಲಿ 40 ಜಿಲ್ಲಾ ಪಂಚಾಯಿತಿ ಸ್ಥಾನಗಳಲ್ಲಿ 17 ಸ್ಥಾನಗಳನ್ನು ಗಳಿಸಿದ್ದು, ತಾಲೂಕು ಪಂಚಾಯತಿ 150 ಸ್ಥಾನಗಳಲ್ಲಿ 57 ಸ್ಥಾನಗಳನ್ನು ಗೆದ್ದಿದೆ. ಜಿಲ್ಲೆಯಲ್ಲಿ ಬಿಜೆಪಿ ಪ್ರಾಬಲ್ಯವನ್ನು ಮೆರೆದಿದೆ. 

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments