Webdunia - Bharat's app for daily news and videos

Install App

ಖರ್ಗೆ ವಿರುದ್ಧ ಕೆಂಡವಾಗುತ್ತಿದೆ ಆಕ್ರೋಶ

Webdunia
ಭಾನುವಾರ, 24 ಮಾರ್ಚ್ 2019 (19:30 IST)
ಉಮೇಶ್ ಜಾಧವ ಕಾಂಗ್ರೆಸ್ ರಾಜೀನಾಮೆ ನೀಡಿದ ಖರ್ಗೆ ವಿರುದ್ಧ ಕೈ ಮುಖಂಡರೇ ತಿರುಗಿ ಬೀಳುತ್ತಿದ್ದಾರೆ.

ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ 371 ಜೆ ತಂದಿದ್ದು ನಾನೇ ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಮಾಜಿ ಸಚಿವ ವೈಜನಾಥ್ ಪಾಟೀಲ್ ತಿರುಗೇಟು ನೀಡಿದ್ದಾರೆ.

ಸಾರ್ವಜನಿಕರು, ಹೋರಾಟಗಾರು, ಜನಪ್ರತಿನಿಧಿಗಳ ಪ್ರಯತ್ನದಿಂದ 371(ಜೆ) ಮಂಜೂರಾಗಿದೆ. ಆದರೆ ನಾನೇ ಮಾಡಿದ್ದು ಎಂಬ ಖರ್ಗೆ ಹೇಳಿಕೆಗೆ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಖರ್ಗೆ ವಿರುದ್ಧ ತೊಡೆತಟ್ಟಿದ ವೈಜಿನಾಥ್ ಪಾಟೀಲ್, ನೀವು ಜನಪ್ರತಿನಿಧಿ ಅದು ನಿಮ್ಮ ಕರ್ತವ್ಯ, ಆದಾಗ್ಯೂ  ನಾನೇ ಮಾಡಿದ್ದು ಅಂತಾ ಇನ್ನೊಮ್ಮೆ ಹೇಳಬೇಡಿ ಎಂದು ಖಡಕ್ ಎಚ್ಚರಿಕೆ ನೀಡಿದರು.

ದೇವರಾಜು ಅರಸು ಬಗ್ಗೆ ಮಾತನಾಡುವ ನೈತಿಕತೆ ಮಲ್ಲಿಕಾರ್ಜುನ ಖರ್ಗೆಗಿಲ್ಲ ಎಂದು ಕಲಬುರಗಿಯಲ್ಲಿ ಖರ್ಗೆ ವಿರುದ್ಧ ಮಾಜಿ ಸಚಿವ ವೈಜನಾಥ್ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರಸು ಬೆನ್ನಿಗೆ ಚೂರಿ ಹಾಕಿದ್ದೆ ಮಲ್ಲಿಕಾರ್ಜುನ ಖರ್ಗೆ ಎಂದು ದೂರಿದ ಅವರು, ಈ ಮೂಲಕ ಅರಸು ಬಿಟ್ಟು ಆರ್. ಗುಂಡೂರಾವ್ ಬಳಿ ಖರ್ಗೆ ಹೋಗಿದ್ದರು ಎಂದರು.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments