Webdunia - Bharat's app for daily news and videos

Install App

ಉರ್ದು ನಾಮಫಲಕಕ್ಕೆ ವಿರೋಧ: ಹೋರಾಟಗಾರರ ಬಂಧನ

Webdunia
ಶನಿವಾರ, 12 ಜನವರಿ 2019 (18:02 IST)
ಮಹಾನಗರ ಪಾಲಿಕೆಯ ನೂತನ ಕಟ್ಟಡಕ್ಕೆ ರಾತ್ರೋರಾತ್ರಿ ಉರ್ದು ನಾಮ ಫಲಕ ಹಾಕಿರುವುದನ್ನು ವಿರೋಧಿಸಿ ಪಾಲಿಕೆಯ ಪ್ರತಿಪಕ್ಷದ ಸದಸ್ಯರು ಹಾಗೂ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಪ್ರತ್ಯೇಕವಾಗಿ ಪ್ರತಿಭಟನೆ ಕೈಗೊಂಡು ತಕ್ಷಣವೇ ಇಲ್ಲಿನ ಉರ್ದು ನಾಮಫಲಕವನ್ನು ತೆಗೆದು ಹಾಕುವಂತೆ ಒತ್ತಾಯಿಸಿದರು.

ಕಲಬುರಗಿ ಮಹಾನಗರ ಪಾಲಿಕೆಯ 1978 ನಿಯಮ 78 ಪ್ರಕಾರ ಪಾಲಿಕೆಯ ಕಚೇರಿಗಳಲ್ಲಿ ಉರ್ದು ಭಾಷೆಯ ನಾಮಫಲಕಗಳನ್ನು ಹಾಕುವಂತಿಲ್ಲ ಆದರೆ ಕೆಲ ಕಿಡಿಗೇಡಿಗಳು ರಾತ್ರೋರಾತ್ರಿ ಇಲ್ಲಿನ ಪಾಲಿಕೆಯ ನೂತನ ಕಾರ್ಯಾಲಯದ ಕಟ್ಟಡದಲ್ಲಿ ಉರ್ದು ಭಾಷೆಯ ನಾಮಫಲಕ ಹಾಕಿರುವುದು ಪಾಲಿಕೆ ಪ್ರತಿಪಕ್ಷದ ಬಿಜೆಪಿ ಸದಸ್ಯರ ಮತ್ತು ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಪಾಲಿಕೆಯ ಎದುರು ಪ್ರತ್ಯೇಕವಾಗಿ ಪ್ರತಿಭಟನೆಯಲ್ಲಿ ತೊಡಗಿದ್ದ ಪಾಲಿಕೆ ಪ್ರತಿಪಕ್ಷದ ನಾಯಕ ವಿಠಲ ಜಾಧವ, ಸದಸ್ಯರಾದ ಆರ್.ಎಸ್.ಪಾಟೀಲ, ವಿಶಾಲ ದರ್ಗಿ, ಶಿವಾನಂದ ಪಾಟೀಲ ಅಷ್ಟಗಿ, ಶಿವುಸ್ವಾಮಿ ಮಠಪತಿ, ವೀರಣ್ಣ ಹೊನ್ನಳ್ಳಿ ಹಾಗೂ ಹೈದ್ರಾಬಾದ ಕರ್ನಾಟಕ ಕನ್ನಡ ಪರ ಸಂಘಟನೆಗಳ ಮುಖಂಡರಾದ ರವಿ ದೇಗಾಂವ, ನಂದಕುಮಾರ ನಾಗಬೂಜಂಗೆ, ಅಮೃತ ಸಿ.ಪಾಟೀಲ ಸಿರನೂರ, ಸಂದೀಪ ಭರಣಿ, ಗೊಪಾಲ ನಾಟಿಕರ, ಸಿದ್ದು ಕಂದಗಲ, ಮನೋಹರ ಬಿರನಳ್ಳಿ ಸೇರಿದಂತೆ ಹಲವರನ್ನು ಪೊಲೀಸರು ಮುಂಜಾಗ್ರತ ಕ್ರಮವಾಗಿ ತಮ್ಮ ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದರು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರವಾಹ ಪರಿಸ್ಥಿತಿ ತಡೆಗೆ ಪಾಕ್‌ ರಕ್ಷಣಾ ಸಚಿವ ನೀಡಿದ ಸಲಹೆಗೆ ವಿಶ್ವವೇ ಶಾಕ್‌

ಕೆ ಕವಿತಾ ಅಮಾನತು: ಇದೊಂದು ದೊಡ್ಡ ನಾಟಕ ಎಂದ ಕಾಂಗ್ರೆಸ್‌ ಸಂಸದ ಅನಿಲ್ ಕುಮಾರ್‌

ಮೋದಿ ತಾಯಿಗೆ ಅವಮಾನ, ಚುನಾವಣೆಯಲ್ಲಿ ಪ್ರತ್ಯುತ್ತರ ಎಂದ ಬಿಹಾರ ಮಹಿಳೆಯರು

ಬಾನು ಮುಪ್ತಾಕ್‌ ಕುಂಕುಮ ಹಚ್ಚಲಿ ಎನ್ನುವುದು ತರವಲ್ಲ: ಸಿಎಂ ಸಿದ್ದರಾಮಯ್ಯ

ಆಕೆ ಈಗಿಲ್ಲ, ಆದರೂ ಗುರಿಯಾಗಿದ್ದಾಳೆ: ತಾಯಿ ಬಗೆಗಿನ ನಿಂದನೆಗೆ ಮೋದಿ ಭಾವುಕ

ಮುಂದಿನ ಸುದ್ದಿ
Show comments