ಕನ್ನಡಪರ ಹೋರಾಟಗಾರರ ವಿರುದ್ಧ ನಿತ್ಯಾನಂದ ಟೀಕಿಸಿ ಕೇವಲ 300 ರೂ.ಗಳಿಗೆ ಹೋರಾಟ ಮಾಡುತ್ತಾರೆ ಎಂದು ತಮ್ಮ ಭಕ್ತರೊಂದಿಗೆ ಉಪನ್ಯಾಸದ ಸಂದರ್ಭದಲ್ಲಿ ಸ್ವಾಮಿ ನಿತ್ಯಾನಂದ ಹೇಳಿದ್ದಾರೆ. ಆಶ್ರಮಕ್ಕೆ ಎಷ್ಟು ದ್ವಾರಗಳಿವೆ ಎಂದು ಗೊತ್ತಿಲ್ಲ. ಯಾವ ಕಡೆಯಿಂದ ಆಶ್ರಮ ಪ್ರವೇಶಿಸುತ್ತೀರಾ ಎಂದು ಮಧ್ಯವರ್ತಿಗಳಿಗೆ ಕೇಳಿದ್ದರು.ಹೋರಾಟ ನಡೆಸಿ ಶಿಫ್ಟ್ ಮುಗಿದ ನಂತರ ಹೋಗುತ್ತಾರೆ.
ನಾನು ಆಶ್ರಮ ಪ್ರವೇಶಿಸಿದ ವೇಳೆ ಹೋರಾಟ ಮಾಡುತ್ತಾರೆ. ಕ್ಯಾಲೆಂಡರ್ ರೀತಿಯಲ್ಲಿ ಹೋರಾಟ ಮಾಡ್ತಾರೆ ಎಂದು ವ್ಯಂಗ್ಯವಾಡಿದರು. ಕನ್ನಡ ಹೋರಾಟಗಾರರಿಗೆ ನನ್ನ ವಿರುದ್ಧ ದ್ವೇಷವೇ ಇಲ್ಲ.
ಪಾಳಿ ಮುಗಿದ ಕೂಡಲೇ ಹೋರಾಟ ಮುಗಿಸಿ ಮನೆಗೆ ಹೋಗ್ತಾರೆ ಎಂದು ನಿತ್ಯಾನಂದ ವಾಗ್ದಾಳಿ ಮಾಡಿದರು. 15, 30 ವರ್ಷಗಳಿಂದ ಈ ಹೋರಾಟಗಾರರದ್ದು ಇದೇ ಪಾಡು ಎಂದೂ ಅವರು ವ್ಯಂಗ್ಯವಾಡಿದರು.