Webdunia - Bharat's app for daily news and videos

Install App

ಮದುವೆ ಮುರಿದ ಒಂದು ಸುಳ್ಳು

Webdunia
ಗುರುವಾರ, 8 ಡಿಸೆಂಬರ್ 2016 (10:52 IST)
ಸಾವಿರ ಸುಳ್ಳು ಹೇಳಿ ಒಂದು ಮಾಡಿ ಮಾಡಿ ಅನ್ನುತ್ತಾರೆ. ಆದರೆ ವರ ಮಹಾಶಯನೊಬ್ಬ ಹೇಳಿದ ಒಂದು ಸುಳ್ಳು ಆತನ ಮದುವೆ ಮರಿದಿದ್ದಲ್ಲದೆ, ಕಂಬಿ ಎಣಿಸುವಂತೆ ಮಾಡಿದೆ. 
ಹೌದು ಚಿಕ್ಕಬಳ್ಳಾಪುರದ ನಿವಾಸಿ ಅಶ್ವತ್ಥನಾರಾಯಣ ಎಂಬಾತ ಇಂದು ನಗರದ ಶ್ರೀದೇವಿ ಕಲ್ಯಾಣಮಂಟಪದಲ್ಲಿ ಮದುವೆಯಾಗುವವನಿದ್ದ. ಕೇವಲ ಡಿಪ್ಲೊಮಾ ಪದವೀಧರನಾಗಿದ್ದ ಆತ ತಾನು ಕೆಎಎಸ್ ಅಧಿಕಾರಿ, ಬಿಇ, ಎಂಬಿಎ ಪದವಿ ಪಡೆದಿದ್ದೇನೆ ಎಂದು ಸುಳ್ಳು ಹೇಳಿ ಟೆಕ್ಕಿಯನ್ನು ಮದುವೆಯಾಗಲು ಹೊರಟಿದ್ದ. ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಕುಮಾರಸ್ವಾಮಿ, ಸಚಿವರಾದ ಪರಮೇಶ್ವರ್, ರಮೇಶ್ ಕುಮಾರ್, ಸಂಸದ ಮುನಿಯಪ್ಪ ಸೇರಿದಂತೆ ಗಣ್ಯರೆಲ್ಲ ಶುಭಕೋರಿದ್ದಾರೆ ಎಂಬಂತೆ ಪ್ರಿಂಟ್ ಹಾಕಿಸಿದ್ದ.
 
ಆದರೆ ಮದುವೆಯ ಹಿಂದಿನ ರಾತ್ರಿ ಅಂದರೆ ಬುಧವಾರ ವಧುವಿನ ಕಡೆಯವರಿಗೆ ಆತನ ನಿಜಬಣ್ಣ ಬಯಲಾಗಿದೆ. ವರನಿಗೆ ಫೋನ್ ಕರೆ ಮಾಡಿದರೆ ಆತ ಸ್ವೀಕರಿಸಿಲ್ಲ. ಬಳಿಕ ಆತನನ್ನು ಮಂಟಪಕ್ಕೆ ಹೊತ್ತು ತಂದು ಸತ್ಯವನ್ನು ಬಾಯಿ ಬಿಡಿಸಿದ್ದಾರೆ.
 
ಮತ್ತೀಗ ಇದರಲ್ಲಿ ತನ್ನದೇನೂ ತಪ್ಪಿಲ್ಲ. ಬ್ರೋಕರ್ ಆಡಿದ ಆಟವಿದು ಎನ್ನುತ್ತಿದ್ದಾನೆ ನಕಲಿ ಕೆ.ಎ.ಎಸ್ ಅಧಿಕಾರಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments