Webdunia - Bharat's app for daily news and videos

Install App

ಸಾರಿಗೆ ಇಲಾಖೆಯಿಂದಲೇ ಓಲಾ, ಊಬರ್‌ಗಳ ದರ ನಿಗಧಿ..!

Webdunia
ಮಂಗಳವಾರ, 18 ಅಕ್ಟೋಬರ್ 2022 (18:55 IST)
ಸಾರಿಗೆ ಇಲಾಖೆಯ ನಿಯಮಗಳನ್ನ ಉಲ್ಲಂಘಿಸಿ, ಗ್ರಾಹಕರಿಂದ ದುಪ್ಪಟ್ಟು ಹಣ ಪೀಕ್ತಿದ್ದ, ಓಲಾ, ಊಬರ್ ಕಂಪನಿಗಳಿಗೆ ರಾಜ್ಯ ಹೈಕೋರ್ಟ್ ಚಾಟಿ ಬೀಸಿದೆ. ಕೋರ್ಟ್ ಸೂಚನೆಯಂತೆ ನವೆಂಬರ್ ೭ನೇ ತಾರೀಕಿನೊಳಗೆ ಸಾರಿಗೆ ಇಲಾಖೆ ಓಲಾ, ಊಬರ್ ಗಳಿಗೆ ದರ ನಿಗದಿ ಮಾಡಲಿದೆ. ಇದೇ ಶುಕ್ರವಾರ, ಓಲಾ, ಊಬರ್ ಕಂಪನಿಗಳ ಪ್ರತಿನಿಧಿಗಳನ್ನ ಸೇರಿದಂತೆ ಆಟೋ ಯೂನಿಯನ್‌ಗಳು, ಚಾಲಕರು, ಸಾರ್ವಜನಿರ ಅಭಿಪ್ರಾಯ ಪಡೆದು ದರ ಮಾಡಲಿದೆ. ಇಲ್ಲಿ ನಿರ್ಧಾರವಾಗುವ ದರದ ಬಗ್ಗೆ ಕೋರ್ಟ್‌ಗೆ ಸಾರಿಗೆ ಇಲಾಖೆ ವರದಿ ನೀಡಲಿದೆ.
 
ಸರ್ಕಾರದಿಂದ ಓಲಾ ಉಬರ್ ಗೆ ಎಷ್ಟು ದರ ನಿಗಧಿಯಾಗಬಹುದು ಅಂತಾ ನೋಡುವುದಾದ್ರೆ
 
- ಸರ್ಕಾರದ ದರ : ೦-೨ ಕಿಲೋ ಮೀಟರ್‌ಗೆ ೩೦ ರೂ ದರ. ೨ ಕೀ.ಮೀ ಮೇಲೆ ಪ್ರತಿ ಕೀಲೋ ಮೀಟರ್‌ಗೆ ೧೫ ರೂ.
 
- ಸಾರಿಗೆ ಇಲಾಖೆ ನಿರ್ಧರಿಸಿದ ದರ: ೦-೨ ಕಿ.ಮೀ ೩೫ ರೂ ದರ. ಪ್ರತಿ ಹೆಚ್ಚುವರಿ ೧ ಕಿಮೀಗೆ ೧೭ವರೆ ರೂ.
 
ಎರೆಡೆರೆಡು ಸಭೆಗಳನ್ನ ನಡೆಸಿ ದರವನ್ನು ನಿಗಧಿ ಮಾಡಲಿದ್ದಾರೆ. ಸಾರಿಗೆ ಇಲಾಖೆಯ ಸೆಕ್ರೆಟರಿ ನೇತೃತ್ವದಲ್ಲಿ ಈ ಸಭೆ ನಡೆಯಲಿದ್ದು, ಇಲ್ಲಿ ನಿರ್ಧಾರವಾಗುವ ದರವನ್ನೇ ಫೈನಲ್ ಮಾಡಿ ಎಂದು ಕೆಲವು ಆಟೋ ಚಾಲಕರು ಪಟ್ಟು ಹಿಡಿದಿದ್ದಾರೆ. ಸದ್ಯ ಪ್ರತಿ ೨ ಕೀಮೀಗೆ ಓಲಾ ಊಬರ್‌ನಿಂದ ೮೦-೧೦೦ ದರ ತೆಗೆದುಕೊಳ್ತಿದ್ದಾರೆ. ೭ನೇ ತಾರೀಖಿಗೆ ಕೋರ್ಟ್ ವಿಚಾರಣೆ ಇರೋದ್ರಿಂದ, ಸಾರಿಗೆ ಇಲಾಖೆಯ ದರದ ವರದಿಯನ್ನ ಕೋರ್ಟ್‌ಗೆ ನೀಡುತ್ತೆ. ಈ ವೇಳೆ ಇದೇ ದರವನ್ನ ಮುಂದುವರೆಸಿ ಅಂದ್ರೆ ಓಲಾ, ಊಬರ್ ಕಂಪನಿಗಳು ನ್ಯಾಯಲಾಯದ ಆದೇಶಕ್ಕೆ ತಲೆಬಾಗಬೇಕಾಗುತ್ತದೆ.
 
 ೨೦೨೧ಕ್ಕೆನೆ ಓಲಾ, ಊಬರ್ ಕಂಪನಿಗಳಿಗೆ ಕೊಟ್ಟಿದ್ದ ಲೈಸನ್ಸ್ ಮುಗಿದಿದೆ. ಹಾಗಿದ್ರೂ ನಗರದಲ್ಲಿ ಅನಧಿಕೃತವಾಗಿ ಸೇವೆಯನ್ನ ಆರಂಭಿಸಿವೆ.ಕ್ರಮಕ್ಕೆ ಮುಂದಾಗಿದ್ದ ಸಾರಿಗೆ ಇಲಾಖೆಯ ಮೇಲೆಯೆ ತಡೆಯಾಜ್ಙೆ ತಂದಿದ್ದ ಓಲಾ, ಊಬರ್ ಕಂಪನಿಗೆ ಕೋರ್ಟ್ ಏನು ಆದೇಶ ಕೊಡುತ್ತೆ  ಅನ್ನೋದನ್ನ ಕಾದು ನೋಡಬೇಕಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Rains: ಇಂದೂ ಇರಲಿದೆ ಭಾರೀ ಮಳೆ, ಯಾವ ಜಿಲ್ಲೆಗಳಲ್ಲಿ ಹೆಚ್ಚು ಮಳೆ ನೋಡಿ

ನಾಳೆಯಿಂದ ಧರ್ಮಸ್ಥಳದಲ್ಲಿ ಹೂತಿಟ್ಟ ಶವಗಳ ಬಗ್ಗೆ ಎಸ್ಐಟಿ ತನಿಖೆ ಶುರು

ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ: ಎನ್.ರವಿಕುಮಾರ್

Nimisha Priya: ಅಂತೂ ಮರಣದಂಡನೆಯಿಂದ ಪಾರಾದ ನರ್ಸ್ ನಿಮಿಷ ಪ್ರಿಯಾ

ಧರ್ಮಸ್ಥಳ ಪ್ರಕರಣದ ಎಸ್ಐಟಿ ತಂಡದ ಬಗ್ಗೆ ಜಿ ಪರಮೇಶ್ವರ್ ಮಹತ್ವದ ಹೇಳಿಕೆ

ಮುಂದಿನ ಸುದ್ದಿ
Show comments