Webdunia - Bharat's app for daily news and videos

Install App

ಬೆಂಗಳೂರಿನ ನೃಪತುಂಗ ರಸ್ತೆ 2 ತಿಂಗಳು ಬಂದ್

Webdunia
ಮಂಗಳವಾರ, 28 ಫೆಬ್ರವರಿ 2017 (10:10 IST)
ಸದಾ ವಾಹನ ದಟ್ಟಣೆಯಿಂದ ಕೂಡಿರುತ್ತಿದ್ದ ಬೆಂಗಳೂರಿನ ನೃಪತುಂಗ ರಸ್ತೆಯನ್ನ ಇಂದಿನಿಂದ 2 ತಿಂಗಳು ಬಂದ್ ಮಾಡಲಾಗಿದೆ. ಬಿಬಿಎಂಪಿಯ ಟೆಂಡರ್ ಶ್ಯೂರ್ ಕಾಮಗಾರಿ ಹಿನ್ನೆಲೆಯಲ್ಲಿ ಖಾಸಗಿ ವಾಹನ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. 14 ಮೀಟರ್ ರಸ್ತೆಯಲ್ಲಿ ಸದ್ಯ 7 ಮೀಟರ್ ಕಾಮಗಾರಿ ನಡೆಯುತ್ತಿದ್ದು, ಹಂತ ಹಂತವಾಗಿ ಕಾಮಗಾರಿ ಪೂರ್ಣಗೊಳ್ಳಲಿದೆ. ಹೀಗಾಗಿ, ಅರ್ಧ ರಸ್ತೆಯಲ್ಲಿ ಸರ್ಕಾರಿ ಬಸ್ ಮತ್ತು ಸರ್ಕಾರಿ ವಾಹನಗಳಿಗೆ ಪ್ರವೇಶ ನೀಡಲಾಗಿದೆ.


ಮ್ಯಾಜಿಸ್ಟ್ರೇಟ್ ಕೋರ್ಟ್, ಮಾರ್ಥಾಸ್ ಆಸ್ಪತ್ರೆ, ಲೋಕೋಪಯೋಗಿ ಇಲಾಖೆ ಕಚೇರಿಗಳು, ಆರ್`ಬಿಐ, ಡಿಜಿಪಿ ಕಚೇರಿಗಳು ಇದೇ ರಸ್ತೆಯಲ್ಲಿರುವುದರಿಂದ ಸಾರ್ಬಜನಿಕರು ಸಂಕಷ್ಟಕ್ಕೆ ತುತ್ತಾಗುವುದು ಖಂಡಿತಾ. ಅದರಲ್ಲೂ ಕಾರ್ಪೊರೇಶನ್ ಕಡೆಗೆ ಹೋಗುವವರು, ಬಿಬಿಎಂಪಿ ಕಚೇರಿಗೆ ತೆರಳುವವರಿಗೂ ತೊಂದರೆ ಆಗಲಿದೆ.

ಬದಲಿ ಮಾರ್ಗ ಹೇಗೆ..?: ನೃಪತುಂಗ ರಸ್ತೆಯ ಬಂದ್`ನಿಂದಾಗಿ ಜನರಿಗಾಗುವ ತೊಂದರೆ ತಪ್ಪಿಸಲು ಪರ್ಯಾಯ ಮಾರ್ಗ ಸೂಚಿಸಲಾಗಿದೆ. ಮೆಜೆಸ್ಟಿಕ್ ಕಡೆಯಿಂದ ಹಡ್ಸನ್ ರಸ್ತೆ ಮಾರ್ಗವಾಗಿ ಕಾರ್ಪೊರೇಶನ್ ಕಡೆ ತೆರಳುವವರು ಕೆ.ಆರ್. ಸರ್ಕಲ್`ನಿಂದ ಕಬ್ಬನ್ ಪಾರ್ಕ್ ಪ್ರವೇಶಿಸಿ ಗ್ರಂಥಾಲಯದ ಬಳಿ ಬಲತಿರುವು ಪಡೆದು ಕಾರ್ಪೊರೇಶನ್ ಕಡೆಗೆ ಹೋಗಬಹುದಾಗಿದೆ. ಈ ರಸ್ತೆಯನ್ನ ಒನ್ ವೇ ಮಾಡಲಾಗಿದೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Operation Sindoor Effect:ಈ ವಿಷಯ ಗೊತ್ತಿಲ್ಲದೆ ಮಾಮೂಲಿ ಟೈಮ್‌ಗೆ ವಿಮಾನ ಹತ್ತಲು ಹೋದ್ರೆ ಮಿಸ್ ಆಗುವುದು ಗ್ಯಾರಂಟಿ

ಪಾಕ್‌, ಭಾರತ ನಡುವೆ ಹೆಚ್ಚಿದ ಉದ್ವಿಗ್ನತೆ: ಚೀನಾಗೂ ತಟ್ಟಿದ ಬಿಸಿ, ನಾಗರಿಕರಿಗೆ ಸಂದೇಶ ರವಾನೆ

ಸರ್ಕಾರದ ಈ ಕ್ರಮವು ದೇಶದ ಸ್ವಾಭಿಮಾನವನ್ನು ಹೆಚ್ಚಿಸಿದೆ: ಸಶಸ್ತ್ರ ಪಡೆಗಳನ್ನು ಅಭಿನಂದಿಸಿದ RSS

'Sindoor Is For Love, Not War: ಚರ್ಚೆ ಹುಟ್ಟುಹಾಕಿದ ಛಾಯಾಗ್ರಾಹಕನ ಪೋಸ್ಟ್‌

Operation Sindoor: ರಾಷ್ಟ್ರ ರಾಜಧಾನಿಯಲ್ಲಿ ಎರಡು ಬಾರಿ ಮೊಳಗಿದ ಸೈರನ್, ಬೆಚ್ಚಿದ ಜನತೆ

ಮುಂದಿನ ಸುದ್ದಿ
Show comments