Webdunia - Bharat's app for daily news and videos

Install App

ಇನ್ಮೇಲೆ ಕಾವೇರಿ ನೀರಿನ ಆತಂಕ ನಗರದಲ್ಲಿ ಇರಲ್ಲ

Webdunia
ಗುರುವಾರ, 7 ಡಿಸೆಂಬರ್ 2023 (15:42 IST)
ಮುಂದಿ‌‌ನ ವರ್ಷದ ಏಪ್ರಿಲ್ ನಿಂದ ಬೆಂಗಳೂರಿನಲ್ಲಿ ಕಾವೇರಿ ನೀರಿಗಿಲ್ಲ ಟೆನ್ಷನ್ ಇರಲ್ಲ.ಬೆಂಗಳೂರಿಗೆ ಏಪ್ರಿಲ್ ನಿಂದ ಹೆಚ್ಚುವರಿ 10 ಟಿಎಂಸಿ ಕಾವೇರಿ ನೀರು ಬಂದೇಬಿಡ್ತು.ಏಪ್ರಿಲ್ ನಿಂದ ಬೆಂಗಳೂರಿಗರ ನೀರಿನ ದಾಹ  ಕಾವೇರಿ 5 ನೇ ಹಂತ ಯೋಜನೆ  ತಣ್ಣಿಸಲಿದೆ.ಸದ್ಯ ಕಾವೇರಿ 1.2.3.4 ಹಂತಗಳ ಮೂಲಕ ಬೆಂಗಳೂರು ನಗರಕ್ಕೆ ನೀರು ಪೂರೈಕೆ ಆಗಲಿದೆ.
 
ನಾಲ್ಕು ಹಂತದಿಂದ ಪ್ರತಿ ನಿತ್ಯ 135 ಕೋಟಿ ಲೀಟರ್ (1450 MLD)  ಬೆಂಗಳೂರು ನಗರಕ್ಕೆ ನೀರು ಪೂರೈಕೆಯಾಗಲಿದೆ.ಹೀಗಿದ್ರೂ ನಗರದಲ್ಲಿ ನಿತ್ಯ 75 ಕೋಟಿ ಲೀಟರ್ ಕೊರತೆಯಾಗಿದೆ.ನೀರಿನ ಕೊರತೆ ನೀಗಿಸಲು ಏಪ್ರಿಲ್ ನಿಂದ ಹೆಚ್ಚುವರಿ ವಾರ್ಷಿಕ 10 ಟಿಎಂಸಿ ನೀರು ಸಿಗಲಿದೆ.ಕಾವೇರಿ 5 ನೇ ಹಂತದ ಯೋಜನೆಗೆ 2014 ಸಚಿವ ಸಂಪುಟ ಅನುಮೋದನೆ ಸಿಗಲಿದೆ.

ಕಾವೇರಿ 5 ನೇ ಹಂತದ ಯೋಜನಾ ಕಾಮಗಾರಿ ಏಪ್ರಿಲ್ ನಲ್ಲಿ ಮುಕ್ತಾಯವಾಗಲಿದ್ದು,ಹೀಗಾಗಿ ಏಪ್ರಿಲ್ ನಿಂದ ಬೆಂಗಳೂರು ನಗರಕ್ಕೆ  ಹೆಚ್ಚುವರಿ ಕಾವೇರಿ ನೀರು ಹರಿದು ಬರಲಿದೆ.ಕಾವೇರಿ 5ನೇ ಹಂತದ ಯೋಜನೆ ಏಪ್ರಿಲ್ ನಲ್ಲಿ ಪೂರ್ಣದ ಭರವಸೆ  ಬೆಂಗಳೂರು ಜಲಮಂಡಳಿ ನೀಡಿದೆ.ಬಹುದಿನಗಳ ಬೆಂಗಳೂರಿಗರ ಕನಸು ನನಸಾಗುವತ್ತ ಸಾಗಿದೆ.
 
ಏಪ್ರಿಲ್ 2024ಕ್ಕೆ ನಗರದ ಪ್ರತಿ ನಾಗರೀಕರಿಗೆ ಜಲಮಂಡಳಿ ಸಿಹಿಸುದ್ದಿ ನೀಡಿದೆ. BWSSB ಕೈಗೆತ್ತಿಕೊಂಡಿರುವ ಕಾವೇರಿ 5ನೇ ಹಂತ ಮುಕ್ತಾಯದತ್ತ ಸಾಗಿದೆ.ಕುಡಿಯುವ ನೀರಿನ ಹಾಹಾಕಾರ ತಪ್ಪಿಸಲು ಯೋಜನೆ ಪೂರ್ಣಗೊಳ್ತಿದೆ.ಏಪ್ರಿಲ್ ನಿಂದ ಬೆಂಗಳೂರಿನ ಮನೆ ಮನೆಗೂ ಕಾವೇರಿ ನೀರು ಪೂರೈಕೆಯಾಗಲಿದೆ.

ಕೋವಿಡ್​ನಿಂದ ಸಾಕಷ್ಟು ವಿಳಂಬವಾಗಿದ್ದ ಕಾವೇರಿ 5ನೇ ಹಂತದ ಕಾಮಗಾರಿ ಬೆಂಗಳೂರಿನ ಹೊರವಲಯಗಳ 110 ಹಳ್ಳಿಗಳಿಗೆ ಸಪ್ಲೈ ಆಗಲಿದೆ.ಈಗಾಗಲೇ ನೀರಿನ ಸಂಪರ್ಕ ಬೆಂಗಳೂರು ಜಲಮಂಡಳಿ ಕಲ್ಪಿಸಲಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ರಾಮಪ್ರಸಾತ್ ಮನೋಹರ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments