Select Your Language

Notifications

webdunia
webdunia
webdunia
webdunia

ಪೂರ್ವ ಸಿದ್ಧತೆ ಇಲ್ಲದೆ ನೋಟ್ ಬ್ಯಾನ್: ಮೋದಿ ವಿರುದ್ಧ ಉಮಾಶ್ರೀ ಕಿಡಿ

ಪೂರ್ವ ಸಿದ್ಧತೆ ಇಲ್ಲದೆ ನೋಟ್ ಬ್ಯಾನ್: ಮೋದಿ ವಿರುದ್ಧ ಉಮಾಶ್ರೀ ಕಿಡಿ
ಬಾಗಲಕೋಟೆ , ಶುಕ್ರವಾರ, 30 ಡಿಸೆಂಬರ್ 2016 (16:30 IST)
ಪೂರ್ವ ಸಿದ್ಧತೆ ಇಲ್ಲದೆ ನೋಟ್ ಬ್ಯಾನ್ ಮಾಡಿರುವುದು ಸರ್ವಾಧಿಕಾರಿ ಧೋರಣೆ ಎಂದು ಮಹಿಳಾ ಮತ್ತು ಮಕ್ಕಳ ಖಾತೆ ಸಚಿವೆ ಉಮಾಶ್ರೀ ಕಿಡಿಕಾರಿದರು.
 
ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶಾದ್ಯಂತ ಏಕಾಏಕಿ 500, 1000 ಮುಖಬೆಲೆಯ ನೋಟು ನಿಷೇಧ ಮಾಡಿರುವುದರಿಂದ ಜನಸಾಮಾನ್ಯರು ದಿನ ನಿತ್ಯದ ನಿರ್ವಹಣೆಗೆ ಪರದಾಡುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. 
 
ದೇಶದ ಹಿತದೃಷ್ಟಿಯ ಉದ್ದೇಶದಿಂದ ಗರಿಷ್ಠ ಮುಖಬೆಲೆಯ ನೋಟುಗಳನ್ನು ನಿಷೇಧಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಇಂಥದೊಂದು ಕಾರ್ಯಕ್ಕೆ ಸಾಕಷ್ಟು ಸಿದ್ಧತೆ ಮಾಡಿಕೊಳ್ಳಬೇಕಿತ್ತು ಎಂದರು.
 
ದೇಶದ ಒಳಿತಿಗಾಗಿ ಯಾವುದೇ ಸರಕಾರಗಳು ಏನೇ ಕೆಲಸ ಮಾಡಿದರು ಸ್ವಾಗತ. ಆದರೆ, ವ್ಯವಸ್ಥಿತವಾಗಿ ಜನಸಾಮಾನ್ಯರಿಗೆ ತೊಂದರೆಯಾಗದಂತೆ ಕಾರ್ಯರೂಪಕ್ಕೆ ತರಬೇಕು ಎಂದು ಮಹಿಳಾ ಮತ್ತು ಮಕ್ಕಳ ಖಾತೆ ಸಚಿವೆ ಉಮಾಶ್ರೀ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಆಜಂ ಖಾನ್‌ಗೆ ಪಕ್ಷ ಒಡೆಯುವ ಪಿತೂರಿ ವಾಸನೆ