Select Your Language

Notifications

webdunia
webdunia
webdunia
webdunia

ಒಂದೇ ಒಂದು ಇಂಚು ಭೂಮಿ ಡಿನೋಟಿಫೈ ಮಾಡಿಲ್ಲ: ಸಿಎಂ ಸ್ಪಷ್ಟನೆ

ಒಂದೇ ಒಂದು ಇಂಚು ಭೂಮಿ ಡಿನೋಟಿಫೈ ಮಾಡಿಲ್ಲ: ಸಿಎಂ ಸ್ಪಷ್ಟನೆ
ಬೆಂಗಳೂರು , ಶನಿವಾರ, 20 ಸೆಪ್ಟಂಬರ್ 2014 (17:43 IST)
ನನ್ನ ವಿರುದ್ದ ಅರ್ಕಾವತಿ ಡಿನೋಟಿಫೈ ಬಗ್ಗೆ ಆರೋಪ ಕೇಳಿಬರುತ್ತಿದೆ. ಆದರೆ  ಒಂದೇ ಒಂದು ಇಂಚು ಭೂಮಿಯನ್ನು ಡಿನೋಟಿಫೈ ಮಾಡಿಲ್ಲ ಕೆಪಿಪಿಸಿ ಕಾರ್ಯಕಾರಿಣಿಯಲ್ಲಿ ಸಿಎಂ ಸಿದ್ದರಾಮಯ್ಯ ಪಕ್ಷದ ಪದಾಧಿಕಾರಿಗಳಿಗೆ ತಿಳಿಸುವ ಪ್ರಯತ್ನ ಮಾಡಿದರು. ಸಿಎಂ ಸಿದ್ದರಾಮಯ್ಯ ಅವರು ಕಾರ್ಯಕಾರಿಣಿ ಸಭೆಯಲ್ಲಿ ತಮ್ಮ ವಿರುದ್ಧ ಕೇಳಿಬರುತ್ತಿರುವ ಆರೋಪಗಳಿಗೆ ಸಭೆಯಲ್ಲಿ ಸ್ಪಷ್ಟೀಕರಣ ನೀಡುವ ಸರ್ವಪ್ರಯತ್ನವನ್ನು ಮಾಡಿದರು.

ಪರಮೇಶ್ವರ್ ಮತ್ತು ತಮ್ಮ ನಡುವೆ ಸಂಬಂಧ ಹಳಸಿಲ್ಲ. ನಾವಿಬ್ಬರೂ ಚೆನ್ನಾಗಿಯೇ ಇದ್ದೇವೆ ಎಂದು ಕೆಪಿಸಿಸಿ ಕಾರ್ಯಕಾರಿಣಿಯಲ್ಲಿ ಅವರು ಮನವರಿಕೆ ಮಾಡಿಕೊಟ್ಟರು. ಯಾವುದೇ ನಿರ್ಧಾರವನ್ನೂ ಇಬ್ಬರೂ ಕೂಡ ಚರ್ಚಿಸಿ ತೀರ್ಮಾನ ಮಾಡ್ತೇವೆ ಎಂದು ಸಿಎಂ ಹೇಳಿದರು.

ಕಾರ್ಯಕಾರಿಣಿಯಲ್ಲಿ ಕೆಲವು ಪ್ರಮುಖ ನಿರ್ಣಯಗಳನ್ನು ಕೈಗೊಂಡಿದ್ದು, ಸಚಿವರು ವಾರದ ಹೆಚ್ಚಿನ ದಿನಗಳನ್ನು ಜಿಲ್ಲೆಗಳಲ್ಲಿ ಕಳೆಯಬೇಕು, ಸ್ಥಳೀಯ ಸಂಸ್ಥೆ ಚುನಾವಣೆಗಳ ಬಗ್ಗೆ ಜಾಗೃತರಾಗಿರಿ, ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಮುಖಂಡರನ್ನು ಕಾರಿನಲ್ಲಿ ಕೂಡಿಸಿಕೊಂಡು ಹೋಗಿ ಎಂದು ಸಚಿವರುಗಳಿಗೆ ಖಡಕ್ ಸೂಚನೆ ರವಾನೆಯಾಗಿದೆ. 

Share this Story:

Follow Webdunia kannada