Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯ ವಿರುದ್ಧ ಟೀಕೆ ಸರಿಯಲ್ಲ: ಬಿದರಿಗೆ ಜಾರ್ಜ್ ತಿರುಗೇಟು

ಸಿದ್ದರಾಮಯ್ಯ ವಿರುದ್ಧ ಟೀಕೆ ಸರಿಯಲ್ಲ: ಬಿದರಿಗೆ ಜಾರ್ಜ್ ತಿರುಗೇಟು
ಬೆಂಗಳೂರು , ಮಂಗಳವಾರ, 27 ಜನವರಿ 2015 (15:24 IST)
ಬಿದರಿ ಅವರು ತಮ್ಮ ಜೀವನವು ಹಿಂದಿನ ದಿನಗಳಂತೆ ಅದೇ ನೆನಪುಗಳಲ್ಲಿಯೇ ಈಗಲೂ ಕೂಡ ನಡೆಯುತ್ತದೆ ಎಂದುಕೊಂಡಿದ್ದಾರೆ. ಆದರೆ ಅವರು ಹಿಂದಿನ ದಿನಗಳಲ್ಲಿ ಹೇಗಿದ್ದರು ಎಂದು ನಮಗೂ ಗೊತ್ತು ಎನ್ನುವ ಮೂಲಕ ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಅವರಿಗೆ ಗೃಹ ಸಚಿವ ಕೆ.ಜೆ.ಜಾರ್ಜ್ ತಿರುಗೇಟು ನೀಡಿದ್ದಾರೆ. 
 
ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು, ಬಿದರಿ ಅವರು ಪದೇ ಪದೇ ಸಿದ್ದರಾಮಯ್ಯನವರ ವಿರುದ್ಧ ಹೇಳಿಕೆ ನೀಡಿರುತ್ತಿರುವುದು ಸರಿಯಲ್ಲ. ಅವರು ಎಲ್ಲಾ ಅಧಿಕಾರಗಳನ್ನು ಅನುಭವಿಸಿ ನಿವೃತ್ತರಾಗಿದ್ದರೂ ಕೂಡ ಸಿಎಂ ಸಿದ್ದರಾಮಯ್ಯನವರನ್ನು ಟೀಕಿಸುವುದು ಮಾತ್ರ ಬಿಟ್ಟಿಲ್ಲ. ಆದರೆ ಅವರು ಈ ಹಿಂದೆ ತಮ್ಮ ಅಧಿಕಾರಾವಧಿಯಲ್ಲಿ ನಡೆದುಕೊಂಡ ಎಲ್ಲಾ ರೀತಿಯ ನಡತೆಗಳನ್ನು ನಾವು ಕಂಡಿದ್ದೇವೆ. ಅವರ ಬಗ್ಗೆ ನಮಗೆ ಗೊತ್ತಿದೆ. ಹಿಂದಿನ ದಿನಗಳಂತೆ ಅದೇ ನೆನಪುಗಳಲ್ಲಿಯೇ ಈಗಲೂ ಕೂಡ ನನ್ನ ಜೀವನ ನಡೆಯುತ್ತದೆ ಎಂದುಕೊಂಡಿದ್ದಾರೆ. ಆದರೆ ಅವೆಲ್ಲವೂ ಸಾಧ್ಯವಿಲ್ಲ ಎನ್ನುವ ಮೂಲಕ ಜಾರ್ಜ್ ಶಂಕರ್ ಬಿದರಿ ಅವರಿಗೆ ತಿರುಗೇಟು ನೀಡಿದರು. 
 
ನಿನ್ನೆ ಶಂಕರ್ ಬಿದರಿ ಅವರು ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆ ಸಿದ್ದರಾಮಯ್ಯನವರು ಸೆಟ್ಲ್ ಮೆಂಟ್ ಸರ್ಕಾರ ನಡೆಸುತ್ತಾ ಇದ್ದಾರೆ ಎನ್ನುವ ಮೂಲಕ ಸರ್ಕಾರವನ್ನು ಟೀಕಿಸಿದ್ದರು. 

Share this Story:

Follow Webdunia kannada