Webdunia - Bharat's app for daily news and videos

Install App

Bengaluru Water crisis: ನನ್ನ ಮನೆಯಲ್ಲೂ ನೀರಿಲ್ಲ ಏನ್ಮಾಡೋಣ: ಡಿಕೆ ಶಿವಕುಮಾರ್

Krishnaveni K
ಬುಧವಾರ, 6 ಮಾರ್ಚ್ 2024 (14:17 IST)
Photo Courtesy: Twitter
ಬೆಂಗಳೂರು: ಬೆಂಗಳೂರಿನಲ್ಲಿ ನೀರಿನ ಬವಣೆ ದಿನೇ ದಿನೇ ಹೆಚ್ಚಾಗುತ್ತಿದೆ. ಇಂತಹ ಕೆಟ್ಟ ಪರಿಸ್ಥಿತಿ ಇತ್ತೀಚೆಗಿನ ಕೆಲವು ವರ್ಷಗಳಲ್ಲೇ ಕಂಡುಬಂದಿಲ್ಲ ಎಂದು ಜನರೇ ಹೇಳುತ್ತಿದ್ದಾರೆ.

ಕೊಳವೆ ಬಾವಿ, ಬಾವಿ ಬತ್ತಿ ಹೋಗಿದ್ದು, ಕಾವೇರಿ ನೀರೂ ವಿರಳವಾಗಿದೆ. ಹೀಗಾಗಿ ಜನರು ಟ್ಯಾಂಕರ್ ಗಳ ಮೊರೆ ಹೋಗುವ ಪರಿಸ್ಥಿತಿ ಬಂದಿದೆ. ಇತ್ತೀಚೆಗೆ ರಸ್ತೆಗಳಲ್ಲಿ ಎಲ್ಲಿ ನೋಡಿದರೂ ಟ್ಯಾಂಕರ್ ಗಳು ಓಡಾಡುತ್ತಿದೆ. ಟ್ಯಾಂಕರ್ ಗಳಿಗೂ ಈಗೀಗ ನೀರು ಸಿಗುವುದೇ ಕಷ್ಟ ಎಂಬ ಪರಿಸ್ಥಿತಿಯಾಗಿದೆ.

ಮೊದಲೆಲ್ಲಾ ಪ್ರತೀ ಲೋಡ್ ಗೆ 500 ರೂ. ಹೇಳುತ್ತಿದ್ದ ಟ್ಯಾಂಕರ್ ಗಳು ಈಗ 15,000 ರಿಂದ 2000 ರೂ.ವರೆಗೆ ವಸೂಲಿ ಮಾಡುತ್ತಿವೆ. ದಿನಕ್ಕೆ 100 ಆರ್ಡರ್ ಬರುತ್ತಿದೆ. ನಮಗೆ 20 ಟ್ಯಾಂಕರ್ ನೀರು ಸಿಕ್ಕರೆ ಹೆಚ್ಚು ಏನು ಮಾಡೋದು ಎಂದು ಟ್ಯಾಂಕರ್ ಮಾಲಿಕರೇ ಕೈಚೆಲ್ಲುತ್ತಿದ್ದಾರೆ.

ಬಿರು ಬೇಸಿಗೆಯಲ್ಲಿ ನೀರಿಲ್ಲದೇ ಜನ ಪರದಾಡುವಂತಾಗಿದೆ. ಈ ಬಗ್ಗೆ ಜನನಾಯಕರನ್ನು ಕೇಳಿದರೆ ಬೋರ್ ಹಾಕಿಸಿಕೊಡೋಣ. ನೀರು ಬರದೇ ಇದ್ದರೆ ಏನು ಮಾಡೋದು ಎಂದು ಮರು ಪ್ರಶ್ನಿಸುತ್ತಿದ್ದಾರೆ. ಬೆಂಗಳೂರಿನ ಕೆಲವೆಡೆ ಇನ್ನೂ ಕಾವೇರಿ ನೀರು ಪೂರೈಕೆಯಾಗುತ್ತಿಲ್ಲ. ಅಲ್ಲೆಲ್ಲಾ ಪರಿಸ್ಥಿತಿ ಶೋಚನೀಯವಾಗಿದೆ.

ಬೆಂಗಳೂರಿನ ನೀರಿನ ಬವಣೆ ಬಗ್ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡಾ ತಮ್ಮ ಅಸಹಾಯಕ ಸ್ಥಿತಿ ಹೇಳಿಕೊಂಡಿದ್ದಾರೆ. ಬೆಂಗಳೂರಿನ ಎಲ್ಲಾ ಕಡೆ ಈಗ ನೀರಿಗೆ ಬರಗಾಲ ಎದುರಾಗಿದೆ. ನಮ್ಮ ಮನೆಯ ಕೊಳವೆ ಬಾವಿಯೂ ಬತ್ತಿ ಹೋಗಿದೆ. ಏನು ಮಾಡೋದು ಎಂದಿದ್ದಾರೆ. ಇತ್ತೀಚೆಗಷ್ಟೇ ನೀರಿನ ಬವಣೆ ತಪ್ಪಿಸಲು ವ್ಯವಸ್ಥೆ ಮಾಡಲು ಸರ್ಕಾರ ಅನುದಾನ ಬಿಡುಗಡೆ ಮಾಡಿತ್ತು. ಆದರೆ ಭೂಮಿಯಲ್ಲೇ ನೀರಿಲ್ಲದೇ ಇರುವಾಗ ಯಾವ ಯೋಜನೆಗಳಿಂದ ಏನು ಪ್ರಯೋಜನ. ಅಂತೂ ಬೆಂಗಳೂರು ನೀರಿನ ಕಷ್ಟ ದೇಶದಾದ್ಯಂತ ಸುದ್ದಿಯಾಗುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Rains: ಈ ಆರು ಜಿಲ್ಲೆಗಳಿಗೆ ನಾಳೆಯೂ ಹವಾಮಾನ ಎಚ್ಚರಿಕೆ ಗಮನಿಸಿ

Maharashtra: ಅಕ್ರಮವಾಗಿ ನೆಲೆಸಿದ್ದ ನಾಲ್ವರು ಬಾಂಗ್ಲಾದೇಶಿಗಳ ಬಂಧನ

Air India ವಿಮಾನ ದುರಂತ: ಮೃತ ನಾಲ್ವರು ಎಂಬಿಬಿಎಸ್‌ ವಿದ್ಯಾರ್ಥಿಗಳು ಇವರೇ

ಕೇರಳದಲ್ಲಿ ಸುರಿದ ಭಾರೀ ಮಳೆಗೆ ಹಲವೆಡೆ ಹಾನಿ, ರೆಡ್‌ ಅಲರ್ಟ್ ಘೋಷಣೆ

NEET result: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಇಲ್ಲಿ ವೀಕ್ಷಣೆ ಮಾಡಿ

ಮುಂದಿನ ಸುದ್ದಿ
Show comments