Webdunia - Bharat's app for daily news and videos

Install App

ಮೂರು ದಶಕಗಳ ಕಾಲ ದೇಶದ ಗಡಿ ಕಾಯ್ದ ಸೈನಿಕನಿಗಿಲ್ಲ ರಕ್ಷಣೆ

Webdunia
ಬುಧವಾರ, 10 ಸೆಪ್ಟಂಬರ್ 2014 (10:43 IST)
28 ವರ್ಷಗಳ ಕಾಲ ದೇಶದ ಗಡಿ ಕಾಯ್ದ  ಸೈನಿಕನೊಬ್ಬನ ನಿವೃತ್ತ ಜೀವನದಲ್ಲಿ ಆತನಿಗೆ ರಕ್ಷಣೆ ಇಲ್ಲದಂತಾದ ವಿಪರ್ಯಾಸ, ಅವಮಾನಕರ ಘಟನೆ ಮೈಸೂರಿನಲ್ಲಿ ವರದಿಯಾಗಿದೆ. 

ಮೈಸೂರಿನ  ನಿವಾಸಿಯಾಗಿರುವ ಹೈದರ್ ತಮಗೆ ಸೇರಿದ ನಿವೇಶನದಲ್ಲಿ ಮನೆ ಕಟ್ಟಿಸದಂತೆ ವ್ಯಕ್ತಿಯೊಬ್ಬ ಅವರಿಗೆ ಬೆದರಿಕೆ ಹಾಕುತ್ತಿದ್ದು ಸೂಕ್ತ ರಕ್ಷಣೆ ನೀಡುವಂತೆ ಹೈದರ್ ಕೇಂದ್ರ ಗೃಹಮಂತ್ರಿ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ. 
 
ತಮಗೆ ಸೇರಿದ ಪಿತ್ರಾರ್ಜಿತ ಆಸ್ತಿಯ ನಿವೇಶನದಲ್ಲಿ  ಹೈದರ್ ಮನೆ ಕಟ್ಟಿಸುತ್ತಿದ್ದು, ಆ ನಿವೇಶನವನ್ನು ಅಲ್ಲೇ ಪಕ್ಕದಲ್ಲಿರುವ ಮಸೀದಿಗೆ ದಾನ ಮಾಡುವಂತೆ ಮಸೀದಿಯ ಸ್ವಯಂ ಘೋಷಿತ ಅಧ್ಯಕ್ಷ  ಸಯ್ಯದ್ ಎಂಬಾತ ಒತ್ತಡ ಹೇರುತ್ತಿದ್ದು, ಹೈದರ್ ಅವರಿಗೆ ನಾನಾ ರೀತಿಯಲ್ಲಿ ಕಿರುಕುಳ ನೀಡುತ್ತಿದ್ದಾನೆ. 
 
ಹೈದರ್ ವಿರುದ್ಧ ಕೋರ್ಟ್  ಮೆಟ್ಟಿಲೇರಿರುವ ಸಯ್ಯದ್ , ಸೈನಿಕನ ಮನೆಯ ವಿದ್ಯುತ್ ಮತ್ತು ನೀರಿನ ಸಂಪರ್ಕ ಕಡಿತಗೊಳ್ಳುವಂತೆ ಮಾಡಿದ್ದಾರೆ.
 
ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಸಯ್ಯದ್  1992ರಲ್ಲಿ ನಡೆದ ಕೋಮುಗಲಭೆಗೆ ಸಂಬಂಧಿಸಿದಂತೆ ಆರೋಪವನ್ನು ಎದುರಿಸುತ್ತಿದ್ದಾನೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments