Select Your Language

Notifications

webdunia
webdunia
webdunia
webdunia

ಸೌಜನ್ಯ ಹತ್ಯೆ, ಸಿಬಿಐ ತನಿಖೆಯಲ್ಲಿ ಪ್ರಗತಿಯಾಗಿಲ್ಲ: ಮಹೇಶ್ ಶೆಟ್ಟಿ

ಸೌಜನ್ಯ ಹತ್ಯೆ,  ಸಿಬಿಐ ತನಿಖೆಯಲ್ಲಿ ಪ್ರಗತಿಯಾಗಿಲ್ಲ:  ಮಹೇಶ್ ಶೆಟ್ಟಿ
ಬೆಂಗಳೂರು , ಗುರುವಾರ, 24 ಜುಲೈ 2014 (17:16 IST)
ವಿದ್ಯಾರ್ಥಿನಿ ಸೌಜನ್ಯಳ ಕೊಲೆ ಪ್ರಕರಣ ಮತ್ತೆ ಸುದ್ದಿಯಾಗುತ್ತಿದೆ. "ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐ ವಹಿಸಿಕೊಂಡಿದೆ. ಆದರೆ ಸಿಬಿಐ ತನಿಖೆಯಲ್ಲಿ ಯಾವುದೇ ಪ್ರಗತಿಯಾಗಿಲ್ಲ. ವೀರೇಂದ್ರ ಹೆಗಡೆ ಕುಟುಂಬ ಪ್ರಭಾವ ಬೀರುತ್ತಿದೆ. ಧರ್ಮಸ್ಥಳದಲ್ಲಿ 472 ಅಸಹಜ ಸಾವುಗಳು ಸಂಭವಿಸಿದೆ ಎಂದು ಪ್ರಜಾಪ್ರಭುತ್ವ ವೇದಿಕೆಯ ಸ್ಥಾಪಕ ಅಧ್ಯಕ್ಷ ಮಹೇಶ್ ಶೆಟ್ಟಿ ಆರೋಪಿಸಿದ್ದಾರೆ.

  ತನಿಖಾಧಿಕಾರಿ ಸಾಕ್ಷ್ಯ ನಾಶ ಮಾಡುತ್ತಿದ್ದಾರೆ. ಸಿಬಿಐ ತನಿಖೆ ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲ ಎಂದು ಮಹೇಶ್ ಶೆಟ್ಟಿ ದೂರಿದರು..  ಈ ಪ್ರಕರಣವನ್ನು ಮುಚ್ಚಿಹಾಕುವ ವ್ಯವಸ್ಥಿತ ತಂತ್ರ ನಡೆಯುತ್ತಿದೆ ಎಂದು ಮಹೇಶ್ ಶೆಟ್ಟಿ ಹೇಳಿದರು.

ತನಿಖೆ ಇದೇ ರೀತಿ ನಿಧಾನಗತಿಯಲ್ಲಿ ಮುಂದುವರಿದರೆ, ನಾವು ಸುಪ್ರೀಂಕೋರ್ಟ್‌ನಲ್ಲಿ ಪಿಐಎಲ್ ಹಾಕುತ್ತೇವೆ. ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲೇ ತನಿಖೆ ನಡೆಯಲಿ ಎಂದು ಮಹೇಶ್ ಶೆಟ್ಟಿ ಹೇಳಿದ್ದಾರೆ. 

Share this Story:

Follow Webdunia kannada