ಕೇಂದ್ರ ಸರಕಾರ 500 ರೂ ಮತ್ತು 1000 ರೂ, ನೋಟುಗಳಿಗೆ ನಿಷೇಧ ಹೇರಿರುವುದು ಸ್ವಾಗತಾರ್ಹ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕೇಂದ್ರ ಸರಕಾರದ ನಿರ್ಧಾರದಿಂದ ವೈಟ್ ಮನಿ ಇದ್ದವರಿಗೆ ತೊಂದರೆಯಿಲ್ಲ. ಬ್ಲ್ಯಾಕ್ಮನಿ ಇದ್ದವರಿಗೆ ಮಾತ್ರ ತೊಂದರೆಯಾಗಲಿದೆ ಎಂದು ತಿಳಿಸಿದ್ದಾರೆ.
ಆದಾಗ್ಯೂ ಕೇಂದ್ರ ಸರಕಾರ ಇನ್ನಷ್ಟು ಕಾಲವಕಾಶ ಕೊಡಬೇಕಾಗಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಕೇಂದ್ರ ಸರಕಾರ 500 ರೂಪಾಯಿ ನೋಟು ಮತ್ತು 1000 ರೂಪಾಯಿ ನೋಟುಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಶೀಘ್ರದಲ್ಲಿ ಹೊಸ ನೋಟುಗಳು ಜಾರಿಗೆ ಬರಲಿವೆ ಎಂದು ಆರ್ಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ