Select Your Language

Notifications

webdunia
webdunia
webdunia
webdunia

ಜೆಡಿಎಸ್ ಪಕ್ಷವನ್ನು ಮುಗಿಸಲು ಯಾರಿಂದಲೂ ಆಗಲ್ಲ : ದೇವೇಗೌಡ

ಜೆಡಿಎಸ್ ಪಕ್ಷವನ್ನು ಮುಗಿಸಲು ಯಾರಿಂದಲೂ ಆಗಲ್ಲ : ದೇವೇಗೌಡ
ಮಂಡ್ಯ , ಗುರುವಾರ, 30 ಜೂನ್ 2016 (14:48 IST)
ಜೆಡಿಎಸ್ ಪಕ್ಷವನ್ನು ಮುಗಿಸಲು ಯಾರಿಂದಲು ಸಾಧ್ಯವಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
 
ಮಂಡ್ಯ ಜನತೆ ಜೆಡಿಎಸ್ ಪಕ್ಷಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಅವರ ಕೊಡುಗೆಯನ್ನು ಜೆಡಿಎಸ್ ಯಾವತ್ತೂ ಮರೆಯುವುದಿಲ್ಲ ಎಂದು ಭಾವುಕರಾದ ಘಟನೆ ನಡೆಯಿತು.
 
ಶಾಸಕ, ವಿಧಾನಪರಿಷತ್‌ನ ಉಪಸಭಾಪತಿ ಮರಿತಿಬ್ಬೆಗೌಡ ಮಾತನಾಡಿ, ಚಲುವರಾಯ ಸ್ವಾಮಿ ರಾಜ್ಯಸಭೆ ಚುನಾವಣೆಯಲ್ಲಿ ವಿಷವಿಕ್ಕುವ ಕೆಲಸ ಮಾಡಿದ್ದಾರೆ. ಇದರಿಂದ ಮಂಡ್ಯ ಜನತೆಯ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ.ಚಲುವರಾಯ ಸ್ವಾಮಿಯನ್ನು ದೇವೇಗೌಡರು ಬೆಳೆಸಿದರು. ಆದರೆ, ಚಲುವರಾಯ ಸ್ವಾಮಿ ಅವರಿಗೆ ವಿಷವುಣಿಸುವ ಕೆಲಸ ಮಾಡಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.
 
ಕಳೆದ ಬಾರಿ ಇಲ್ಲಿ ಗೆದ್ದಿದ್ದ ಶಾಸಕರು ನಮ್ಮ ಜೊತೆಯಲ್ಲಿಲ್ಲ. ಆದರೆ, ಹೆಚ್ಚಿನ ಸಂಖ್ಯೆಯ ಜನರಿದ್ದಾರೆ. ಪಕ್ಷಕ್ಕೆ ದ್ರೋಹ ಬಗೆದವರನ್ನು ಶೀಘ್ರವೇ ಉಚ್ಚಾಟಿಸಬೇಕು ಎಂದು ದೇವೇಗೌಡರಿಗೆ ಮನವಿ ಮಾಡಿದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅಸಂವೇದನಾಶೀಲ: ಅತ್ಯಾಚಾರ ಪೀಡಿತೆ ಜತೆ ಮಹಿಳಾ ಆಯೋಗದ ಸದಸ್ಯೆ ಸೆಲ್ಫಿ