Webdunia - Bharat's app for daily news and videos

Install App

ಗಣೇಶ ಹಬ್ಬಕ್ಕೆ ಡಿಜೆಗೆ ಅವಕಾಶವಿಲ್ಲ, ಈದ್ ಮಿಲಾದ್ ಗೆ ಒಪ್ಪಿಗೆ ಇದೆಯಾ

Krishnaveni K
ಮಂಗಳವಾರ, 3 ಸೆಪ್ಟಂಬರ್ 2024 (13:54 IST)
ಬೆಂಗಳೂರು: ಈ ಬಾರಿ ಗಣೇಶೋತ್ಸವ ಆಚರಣೆ ವೇಳೆ ಡಿಜೆ ಬಳಕೆಗೆ ಅವಕಾಶವಿಲ್ಲ ಎಂದು ರಾಜ್ಯ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ. ಹಾಗಿದ್ದರೆ ಎರಡೇ ದಿನದಲ್ಲಿ ಬರುವ ಈದ್ ಮಿಲಾದ್ ಕತೆಯೇನು ಎಂಬುದಕ್ಕೂ ಈಗ ಸ್ಪಷ್ಟನೆ ಸಿಕ್ಕಿದೆ.

ಇದೇ ವಾರಂತ್ಯಕ್ಕೆ ಗಣೇಶ ಹಬ್ಬ ಬರುತ್ತಿದೆ. ಹೀಗಾಗಿ ಅಲ್ಲಲ್ಲಿ ಗಣೇಶನ ಮೂರ್ತಿ ಕೂರಿಸಿ ಜೋರಾಗಿ ಮ್ಯೂಸಿಕ್ ಹಾಕಿ ಜನ ಸಂಭ್ರಮಾಚರಿಸುವುದು ಸಹಜ. ಆದರೆ ಈ ಬಾರಿ ರಾಜ್ಯ ಸರ್ಕಾರ ಕೆಲವೊಂದು ಷರತ್ತು ವಿಧಿಸಿದೆ. ಗಲ್ಲಿ ಗಲ್ಲಿಯಲ್ಲಿ ಗಣೇಶ ಕೂರಿಸುವ ಮೊದಲು ಸ್ಥಳೀಯಾಡಳಿತದ ಒಪ್ಪಿಗೆ ಪಡೆಯಬೇಕು.

ಯಾರೂ ರಸ್ತೆ ಅಡ್ಡಗಟ್ಟಿ ಗಣೇಶನ ಮೂರ್ತಿ ಕೂರಿಸುವಂತಿಲ್ಲ. ರಾತ್ರಿ 10 ರ ನಂತರ ಗಣೇಶ ವಿಸರ್ಜನೆ ಮಾಡುವಂತಿಲ್ಲ. ಜೊತೆಗೆ ಡಿಜೆ ಸೌಂಡ್ ಹಾಕಿ ಇತರರಿಗೆ ತೊಂದರೆ ಮಾಡುವಂತಿಲ್ಲ ಎಂದು ನಿಷೇಧ ಹೇರಿದೆ. ಗಣೇಶ  ಹಬ್ಬ ಮುಗಿದ ಬಳಿಕ ಮುಸಲ್ಮಾನ ಬಾಂಧವರ ಈದ್ ಹಬ್ಬ ಬರುತ್ತಿದೆ.

ಸೆಪ್ಟೆಂಬರ್ 7 ಕ್ಕೆ ಗಣೇಶ ಹಬ್ಬವಾದರೆ ಸೆಪ್ಟೆಂಬರ್ 15-16 ಕ್ಕೆ ಈದ್ ಮಿಲಾದ್ ಹಬ್ಬವಿದೆ. ಈ ಹಬ್ಬಕ್ಕೂ ಡಿಜೆಗೆ ಅವಕಾಶವಿಲ್ಲ ಎಂದು ಸರ್ಕಾರ ಫರ್ಮಾನು ಹೊರಡಿಸಿದೆ. ಡಿಜೆ ಸಿಸ್ಟಂಗಳನ್ನು ಎರಡೂ ಹಬ್ಬಕ್ಕೆ ನಿಷೇಧಿಸಲಾಗಿದೆ. ಡಿಜೆ ಸೌಂಡ್ ಹಾಕಿದರೆ ಚಿಕ್ಕಮಕ್ಕಳಿಗೆ, ವಯಸ್ಸಾದವರಿಗೆ, ದುರ್ಬಲ ಹೃದಯದವರಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಈ ಆದೇಶ ಹೊರಡಿಸಲಾಗಿದೆ. ಎರಡೂ ಹಬ್ಬವನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸಬೇಕು ಎಂದು ಸರ್ಕಾರ ಹೊಸ ನಿಯಮಾವಳಿಗಳನ್ನು ಜಾರಿಗೆ ತಂದಿದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Bengaluru Stampede: ಅಮಾನತುಗೊಂಡ ಐಪಿಎಸ್ ಅಧಿಕಾರಿಯಿಂದ ಹೊಸ ಹೆಜ್ಜೆ

Indore murder: ರಾಜ ರಘುವಂಶಿ ಮರಣೋತ್ತರ ಪರೀಕ್ಷೆಯಲ್ಲಿ ಶಾಕಿಂಗ್ ಸತ್ಯಗಳು ಬಯಲು

Assam Rain: ಅಸ್ಸಾಂ ಪ್ರವಾಹ ಇನ್ನೂ ಗಂಭೀರ, ಸಂಕಷ್ಟದಲ್ಲಿ 2.6 ಲಕ್ಷ ಜನರು

Meghalaya Murder Mystery: ಮರಣೋತ್ತರ ಪರೀಕ್ಷೆಯಲ್ಲಿ ಮಹಾಸ್ಫೋಟಕ ಮಾಹಿತಿ ಹೊರಕ್ಕೆ

Mumbai Train Tragedy: ರೈಲ್ವೆ ಮಂಡಳಿಯಿಂದ ದಿಢೀರ್‌ ಕ್ರಮ, ಇಲ್ಲಿದೆ ಡೀಟೆಲ್ಸ್‌

ಮುಂದಿನ ಸುದ್ದಿ
Show comments