ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಜಿ ಪ್ರದಾನಿ ದೇವೇಗೌಡ ಮತ್ತು ಕುಮಾರಸ್ವಾಮಿಯನ್ನು ಟೀಕಿಸಿರುವುದನ್ನು ಜೆಡಿಎಸ್ ನಾಯಕರು ಮರೆತಿರಲಿಕ್ಕಿಲ್ಲ. ಕಾಂಗ್ರೆಸ್, ಜೆಡಿಎಸ್ ಮೈತ್ರಿ ವರದಿ ಉಹಾಪೋಹ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.
ಕಳೆದ ಹಲವಾರು ತಿಂಗಳುಗಳಿಂದ ಜೆಡಿಎಸ್ ಬಿಜೆಪಿ ಒಂದಾಗಿ ಹಲವಾರು ವಿಷಯಗಳ ಬಗ್ಗೆ ಸರಕಾರದ ವಿರುದ್ಧ ಹೋರಾಡುತ್ತಿವೆ. ಆದ್ದರಿಂದ ಒಂದು ವೇಳೆ ಮೈತ್ರಿಯಾದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಯಾಗಬಹುದು ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಇಂತಹ ಅಪವಿತ್ರ ಮೈತ್ರಿಗೆ ಹಸರಿ ನಿಶಾನೆ ತೋರಲು ಸಾಧ್ಯವಿಲ್ಲ. ಒಂದು ವೇಳೆ ತೋರಿದಲ್ಲಿ ಕಾಂಗ್ರೆಸ್ ಮಾನ ಮರ್ಯಾದೆ ಇಲ್ಲದಂತಹ ಪಕ್ಷವಾಗುತ್ತದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಜನತೆ ಬಿಜೆಪಿ ಪಕ್ಷಕ್ಕೆ 100 ಕ್ಷೇತ್ರಗಳಲ್ಲಿ ಜಯದೊರಕಿಸಿಕೊಟ್ಟು ಬಿಬಿಎಂಪಿಯಲ್ಲಿ ಅಧಿಕಾರ ನಡೆಸಲು ಆದೇಶ ನೀಡಿದ್ದಾರೆ. ಬಿಜೆಪಿ ಪಕ್ಷ ಬಿಬಿಎಂಪಿ ಸಭೆಯಲ್ಲಿ ಬಹುಮತ ಸಾಬೀತು ಪಡಿಸಲು ಸಿದ್ದವಿದೆ ಎಂದು ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.