Select Your Language

Notifications

webdunia
webdunia
webdunia
webdunia

ಮುಂದಿನ ಚುನಾವಣೆಯೇ ಸಿಎಂ ಸಿದ್ಧರಾಮಯ್ಯಗೆ ಕೊನೇ ಚುನಾವಣೆ

ಮುಂದಿನ ಚುನಾವಣೆಯೇ ಸಿಎಂ ಸಿದ್ಧರಾಮಯ್ಯಗೆ ಕೊನೇ ಚುನಾವಣೆ
Mysore , ಶನಿವಾರ, 15 ಜುಲೈ 2017 (10:54 IST)

ಮೈಸೂರು: ಸಿಎಂ ಸಿದ್ಧರಾಮಯ್ಯ ಇತ್ತೀಚೆಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಮುಂಬರುವ ಚುನಾವಣೆಗೆ ದಿವಂಗತ ಪುತ್ರ ರಾಕೇಶ್ ನನ್ನು ತಮ್ಮ ಬದಲಿಗೆ ಕಣಕ್ಕಿಳಿಸುವ ಇರಾದೆಯಿತ್ತು. ನಂತರ ತಾನು ರಾಜಕೀಯದಿಂದ ದೂರವಾಗಬೇಕೆಂದಿತ್ತು ಎಂದಿದ್ದರು. ಅದೀಗ ನಿಜವಾಗಲಿದೆ.

 

ಪುತ್ರ ರಾಕೇಶ್ ಏನೋ ಈಗಿಲ್ಲ. ಆದರೆ ಮುಂಬರುವ ವಿಧಾನಸಭೆ ಚುನಾವಣೆಯೇ ತನ್ನ ರಾಜಕೀಯ ಜೀವನದಲ್ಲಿ ಸ್ಪರ್ಧಿಸುವ ಕೊನೆಯ ಚುನಾವಣೆಯಾಗಬಹುದು ಎಂದು ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸುವೆ ಎಂದಿದ್ದಾರೆ.

 

ಆದರೆ ಮುಂಬರುವ ದಿನಗಳಲ್ಲಿ ಇನ್ನೊಬ್ಬ ಪುತ್ರ ಯತೀಂದ್ರನನ್ನು ಕಣಕ್ಕಿಳಿಸುವ ನಿರ್ಧಾರ ಹೈಕಮಾಂಡ್ ಗೆ ಬಿಟ್ಟಿದ್ದು ಎಂದಿದ್ದಾರೆ. ಈಗಾಗಲೇ ಯತೀಂದ್ರ ಅಪ್ಪನ ಜವಾಬ್ದಾರಿಗಳಿಗೆ ಹೆಗಲು ಕೊಡುತ್ತಿದ್ದು, ಮುಂಬರುವ ದಿನಗಳಲ್ಲಿ ರಾಜಕೀಯಕ್ಕೆ ಬರುವ ಉದ್ದೇಶ ಹೊಂದಿದ್ದಾರೆಂದು ವರದಿಯಾಗಿತ್ತು. ಆದರೆ ಅದರ ಬಗ್ಗೆ ಸ್ಪಷ್ಟವಾಗಿ ತಿಳಿಸಲು ಸಿಎಂ ನಿರಾಕರಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ


Share this Story:

Follow Webdunia kannada

ಮುಂದಿನ ಸುದ್ದಿ

ನ್ಯಾನೋ ಕಾರ್ ಗೆ ಸದ್ಯದಲ್ಲೇ ಟಾಟಾ?