Webdunia - Bharat's app for daily news and videos

Install App

ನವ ದಂಪತಿಗಳಿಗೆ ಖಳನಾಯಕಿಯಾಗಿರೋ ಹುಡುಗಿಯ ತಾಯಿ?

Webdunia
ಬುಧವಾರ, 24 ಅಕ್ಟೋಬರ್ 2018 (22:42 IST)
ಅಂತರ್ಜಾತಿ ಪ್ರೇಮ ವಿವಾಹವಾಗಿದ್ದ ದಂಪತಿಯನ್ನ ಯುವತಿಯ ತಾಯಿಯೇ ಬೇರ್ಪಡಿಸಿರೋ ಆರೋಪ ಕೇಳಿಬಂದಿದೆ. ನವ ದಂಪತಿಗಳಿಗೆ ಖಳನಾಯಕಿಯಾಗಿರೋ ಹುಡುಗಿಯ ತಾಯಿಯ ಕೃತ್ಯದಿಂದ ಹುಡುಗ ನಲುಗುವಂತಾಗಿದೆ.

ಮೇ 13 ರಂದು ಶ್ರೀಧರ್ (28) ಪ್ರೀಯಾ (18) ವಿವಾಹವಾಗಿದ್ದರು. ಬೆಂಗಳೂರಿನ ಮಾದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿವಾಹವಾಗಿದ್ದ ಯುವ ಜೋಡಿಯು, ವಿವಾಹ ನಂತರ ಹುಡುಗನ ಮನೆಯಿಂದ ಯುವತಿಯನ್ನ ಯುವತಿ ತಾಯಿ ವಿಜಯಲಕ್ಷ್ಮಿ ಬಾಯಿ ಕರೆದೊಯ್ದಿದ್ದರು.

ಯುವತಿ ಪ್ರಿಯಾಳನ್ನು ಮತ್ತೆ ವಿಜಯಲಕ್ಷ್ಮಿ ಬಾಯಿ ಸಹೋದರನೊಂದಿಗೆ ಮರು ಮದುವೆ ಮಾಡಿಸಿದ್ದಳು.  ಮುರುಘಾ ಮಠದಲ್ಲಿ ವಿವಾಹ ಮಾಡಿಸಿದ್ದ ಯುವತಿ ತಾಯಿಯು, ಸಹೋದರ ಮಾವ ರಾಘವೇಂದ್ರ ಜೊತೆ ಮರು ಮದುವೆ ಮಾಡಿಸಿದ್ದಳು.
ಮನೆಯವರ ಕಿರುಕುಳಕ್ಕೆ ಬೇಸತ್ತು ಮತ್ತೆ ಮನೆ ಬಿಟ್ಟು ಬಂದಿದ್ದ ಯುವತಿ ಪ್ರೀಯಾ, ಮತ್ತೆ ವಿವಾಹದ ರಿಜಿಸ್ಟರ್  ಶ್ರೀಧರ್ ಮತ್ತು ಪ್ರೀಯ ಎಂದು ಮಾಡಿಸಿದ್ದರು.

ಹಿರಿಯೂರಿನಲ್ಲಿ ಸಂಸಾರ ಮಾಡುತ್ತಿದ್ದ ನವ ದಂಪತಿ ಅನ್ಯೋನ್ಯವಾಗಿದ್ದರು. ಅಕ್ಟೋಬರ್ 2 ರಂದು ಮತ್ತೆ ಆಸ್ಪತ್ರೆಗೆಂದು ಬಂದಾಗ ಬಲವಂತವಾಗಿ ತಾಯಿ ಜಯಲಕ್ಷ್ಮಿ  ಯುವತಿ ಪ್ರಿಯಾಳನ್ನು ಎಳೆದೊಯ್ದ ಆರೋಪ ಕೇಳಿಬಂದಿದೆ.
ಪತ್ನಿಗಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಪತಿ ಶ್ರೀಧರ್ ನ್ಯಾಯ ಬೇಡುತ್ತಿದ್ದಾನೆ.  



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಆನೆ ಜತೆ ಸೆಲ್ಪಿ ವಿಡಿಯೋ ವೈರಲ್, ಇನ್ಮುಂದೆ ಈ ಥರ ಮಾಡುವವರ ವಿರುದ್ಧ ಕ್ರಮಕ್ಕೆ ಈಶ್ವರ್ ಖಂಡ್ರೆ ಸೂಚನೆ

ಪಾಕ್ ವಿರುದ್ಧ ಅದು ಸರಿಯಾದ ಪ್ರತೀಕಾರ: ಆಪರೇಷನ್ ಸಿಂಧೂರ್‌ನ್ನು ಶ್ಲಾಘಿಸಿದ ಜಪಾನಿನ ಕಾರ್ಯತಂತ್ರ ತಜ್ಞ

IPL 2025: ಅನುಚಿತ ವರ್ತನೆಗೆ ಡೆಲ್ಲಿ ವೇಗದ ಬೌಲರ್‌ ಮುಕೇಶ್‌ ಕುಮಾರ್‌ಗೆ ಬಿತ್ತು ದಂಡ

ಜಮ್ಮು ಕಾಶ್ಮೀರದ ಭಯೋತ್ಪಾದಕರೊಂದಿಗಿನ ಗುಂಡಿನ ಚಕಮಕಿಯಲ್ಲಿ ಯೋಧ ಹುತಾತ್ಮ

ರಾಮನಗರ ಇನ್ಮುಂದೆ ಬೆಂಗಳೂರು ದಕ್ಷಿಣ ಜಿಲ್ಲೆ: ಡಿಸಿಎಂ ಡಿಕೆ ಶಿವಕುಮಾರ್

ಮುಂದಿನ ಸುದ್ದಿ
Show comments