ಡಿವಿಎಸ್ ಪುತ್ರ ಕಾರ್ತಿಕ್ ಗೌಡ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದ ಮೈತ್ರಿಯಾ ಗೌಡ ಜೊತೆ ತಮಗೆ ಮದುವೆಯಾಗಿತ್ತು ಎಂದು ಚಿತ್ರ ನಿರ್ದೇಶಕ ರಿಷಿ ದೂರು ನೀಡುವ ಮೂಲಕ ಮೈತ್ರಿಯಾ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಬೆಂಗಳೂರಿನ 2ನೇ ಎಸಿಎಂಎಂ ಕೋರ್ಟ್ನಲ್ಲಿ ಈ ಕುರಿತು ರಿಷಿ ದೂರು ನೀಡಿದ್ದಾರೆ. 'ಸೂರ್ಯಾ ದಿ ಗ್ರೇಟ್ 'ಸಿನಿಮಾದ ಷೂಟಿಂಗ್ ವೇಳೆ ತಮಗಿಬ್ಬರಿಗೆ ಪರಿಚಯವಾಗಿತ್ತು ಎಂದು ರಿಷಿ ಹೇಳಿದ್ದಾರೆ.
ಮದುವೆಯಾಗಿ ಲಾಡ್ಜ್ನಲ್ಲಿ ನಾಲ್ಕು ತಿಂಗಳು ಸಂಸಾರ ಮಾಡಿದ್ದ ಮೈತ್ರಿಯಾ ಗೌಡ ನಂತರ ಬೇರಾರೋ ಜೊತೆ ಓಡಾಡಿಕೊಂಡಿದ್ದನ್ನು ಪ್ರಶ್ನಿಸಿದ್ದಕ್ಕೆ ನನ್ನ ಬಳಿಯಿದ್ದ 2 ಲಕ್ಷ ರೂ. ಹಣದೊಂದಿಗೆ ಪರಾರಿಯಾಗಿದ್ದಳು ಎಂದು ದೂರಿದ್ದಾರೆ. ರಿಷಿ ಕೊಟ್ಲಲ್ಲಪ್ಪೋ ಕೈ ಚಿತ್ರದ ನಿರ್ದೇಶಕರಾಗಿದ್ದು, ನಟಿ ನಯನಾಕೃಷ್ಣ ಜೊತೆ ಬೀದಿಯಲ್ಲಿ ಜಗಳವಾಡುವ ಮೂಲಕ ಸುದ್ದಿಯಾಗಿದ್ದರು. ಇಬ್ಬರೂ ಬೀದಿಯಲ್ಲಿ ಚಪ್ಪಲಿಯಲ್ಲಿ ಹೊಡೆದಾಡಿಕೊಂಡಿದ್ದರು.
2006ರಲ್ಲಿ ಮೈತ್ರಿಯಾ ಬೇರೆಯವರಿಗೂ ಮೋಸ ಮಾಡಿದ್ದಳು. ಉದ್ಯಮಿ ಅಂಜನ್ ಕುಮಾರ್ ಎಂಬವರಿಗೂ ಮೈತ್ರಿಯಾ ಮೋಸ ಮಾಡಿದ್ದಳೆಂದುರಿ ಷಿ ದೂರಿದ್ದಾರೆ. ಉದ್ಯಮಿ ಅಂಜನ್ ಕುಮಾರ್ ಜೊತೆ ಕೂಡ ಲೈಂಗಿಕ ಸಂಪರ್ಕ ಬೆಳೆಸಿ ನಂತರ ಬ್ಲಾಕ್ಮೇಲ್ ಮಾಡಿದ್ದಾಳೆ ಎಂದು ರಿಷಿ ದೂರಿದ್ದಾರೆ. ಇತ್ತೀಚೆಗೆ ಕಾರ್ತಿಕ್ ಗೌಡರನ್ನು ಮೈತ್ರಿಯಾ ವರಿಸಿರುವ ವಿಚಾರ ತಿಳಿದು, ಸನ್ಮಾನ್ ಲಾಡ್ಜ್ನಲ್ಲಿ ಕದ್ದೊಯ್ದಿದ್ದ 2 ಲಕ್ಷ ರೂ. ವಾಪಸು ಕೊಡುವಂತೆ ಕೇಳಿದಾಗ ಮೈತ್ರಿಯಾ ನನಗೆ ಜೀವ ಬೆದರಿಕೆ ಹಾಕಿದಳು. ರಾಜ್ಯದ ಪ್ರಭಾವಿ ರಾಜಕಾರಣಿ ಬೆಂಬಲ ನನಗಿದೆ. ನನ್ನ, ನಿನ್ನ ಸಂಬಂಧ ಬಾಯಿಬಿಟ್ಟರೆ ಹುಷಾರು ಎಂದು ಮೈತ್ರಿಯಾ ಗೌಡ ಬೆದರಿಸಿದ್ದಾಗಿ ರಿಷಿ ದೂರಿನಲ್ಲಿ ತಿಳಿಸಿದ್ದಾರೆ.