ದಾವಣಗೆರೆಯಲ್ಲಿ ಕವಿತಾ ಎಂಬ ಯುವತಿಯ ಲವ್ ಸ್ಟೋರಿಗೆ ಹೊಸ ತಿರುವು ಸಿಕ್ಕಿದೆ. ಪ್ರತಾಪ್ ಎಂಬವರನ್ನು ಪ್ರೀತಿಸಿ ಮದುವೆಯಾಗಿ ಒಂದು ವಾರ ಕಳೆಯುವಷ್ಟರಲ್ಲೇ ಕವಿತಾಳ ಪೋಷಕರು ಇವರಿಬ್ಬರನ್ನು ಬೇರ್ಪಡಿಸಿ ಕವಿತಾಳನ್ನು ಮನೆಗೆ ಕರೆದುಕೊಂಡು ಹೋದ ಪ್ರಸಂಗ ವರದಿಯಾಗಿದೆ. ಈ ಬಗ್ಗೆ ಪ್ರತಾಪ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಅಷ್ಟರಲ್ಲಿ ಕವಿತಾ ಲವ್ ಸ್ಟೋರಿ ಹೊಸ ಟ್ವಿಸ್ಟ್ ಪಡೆದುಕೊಂಡು, ಕವಿತಾಳನ್ನು ತಾನು ಕಳೆದ ಮೂರು ವರ್ಷದಿಂದ ಪ್ರೀತಿಸುತ್ತಿರುವುದಾಗಿ ಕವಿತಾಳ ಮೊದಲ ಪ್ರಿಯಕರ ಸಚಿನ್ ಹೇಳಿದ್ದಾನೆ. ಆದರೆ ಕವಿತಾ ಪ್ರಿಯಕರನ ಸ್ನೇಹವನ್ನು ತ್ಯಜಿಸಿ ಪ್ರತಾಪ್ನನ್ನು ಮದುವೆಯಾಗಿದ್ದು ಅಚ್ಚರಿಗೊಳಿಸಿದೆ. . ಸಚಿನ್ ಮತ್ತು ಕವಿತಾ ನಡುವೆ ಪ್ರೀತಿ ಇರುವುದು ನನಗೆ ಗೊತ್ತಿಲ್ಲ. ಸಚಿನ್ ಮದುವೆಗೆ ಮುಂಚೆಯೇ ಈ ವಿಷಯವನ್ನು ಹೇಳಬಹುದಿತ್ತು.
ಕವಿತಾಳ ಬಗ್ಗೆ ಕೆಟ್ಟ ಭಾವನೆ ಹುಟ್ಟಿಸುವುದು ಬೇಡ ಎಂದು ಪ್ರತಾಪ್ ಸುದ್ದಿವಾಹಿನಿಯೊಂದಿಗೆ ಮಾತನಾಡುತ್ತಾ ಹೇಳಿದ್ದಾನೆ. ಆದರೆ ಸಚಿನ್ ವಾದವೇ ಬೇರೆ ರೀತಿಯಿದೆ. ಅಣ್ಣ, ತಂಗಿ ಎಂದು ಹೇಳಿಕೊಂಡು ಇದ್ದವರು ಈಗ ಗುಟ್ಟಾಗಿ ಮದುವೆಯಾಗಿದ್ದಾರೆ ಎಂದು ಸಚಿನ್ ದೂರಿದ್ದು, ತಾನು ಕವಿತಾಳನ್ನು ಮೂರು ವರ್ಷದಿಂದ ಪ್ರೀತಿಸುತ್ತಿರುವುದರಿಂದ ತನಗೆ ನ್ಯಾಯ ಸಿಗಬೇಕು ಎಂದು ಹೇಳಿದ್ದಾನೆ.