Select Your Language

Notifications

webdunia
webdunia
webdunia
webdunia

ಬೆಂಗಳೂರಿಗೆ ನೂತನ ಆಯುಕ್ತರ ನೇಮಕ: ಎಂ.ಎನ್.ರೆಡ್ಡಿಗೆ ಬಡ್ತಿ

ಬೆಂಗಳೂರಿಗೆ ನೂತನ ಆಯುಕ್ತರ ನೇಮಕ: ಎಂ.ಎನ್.ರೆಡ್ಡಿಗೆ ಬಡ್ತಿ
ಬೆಂಗಳೂರು , ಶುಕ್ರವಾರ, 31 ಜುಲೈ 2015 (13:15 IST)
ಬೃಹತ್ ಬೆಂಗಳೂರು ಮಹಾನಗರದ ನೂತನ ಪೊಲೀಸ್ ಆಯುಕ್ತರನ್ನಾಗಿ ರಾಜ್ಯ ಸರ್ಕಾರವು ಐಪಿಎಸ್ ಅಧಿಕಾರಿ ಎನ್.ಎಸ್.ಮೇಘರಿಕ್ ಅವರನ್ನು ನೇಮಿಸಿದ್ದು, ಈ ಹಿಂದೆ ಇದೇ ಹುದ್ದೆಯಲ್ಲಿದ್ದ ಎಂ.ಎನ್.ರೆಡ್ಡಿ ಅವರಿಗೆ ಮುಂಬಡ್ತಿ ನೀಡಿದೆ.  
 
ಈ ಸಂಬಂಧ ಸರ್ಕಾರದಿಂದ ಇನ್ನೂ ಅಧಿಕೃತ ಪ್ರಕರಣೆ ಹೊರ ಬಿದ್ದಿಲ್ಲ. ಆದರೆ ನೇಮಕಾತಿ ಮಾತ್ರ ಖಚಿತವಾಗಿದ್ದು, ಇಂದು ಸಂಜೆ ವೇಳೆ ಅಧಿಕೃತ ಪ್ರಕಟಣೆ ಹೊರಡಿಸಲಾಗುತ್ತದೆ ಎಂದು ಹೇಳಲಾಗಿದೆ. 
 
ಈ ಹಿಂದೆ ಬೆಂಗಳೂರು ನಗರದ ಪೊಲೀಸ್ ಆಯುಕ್ತರಾಗಿದ್ದ ಎಂ.ಎನ್.ರೆಡ್ಡಿ ಅವರನ್ನು ರಾಜ್ಯದ ಅಗ್ನಿ ಶಾಮಕ ಮತ್ತು ಗೃಹ ರಕ್ಷಕ ದಳದ ಡಿಸಿಪಿಯನ್ನಾಗಿ ಬಡ್ತಿ ನೀಡಲಾಗಿದೆ. ಈ ಡಿಸಿಪಿ ಹುದ್ದೆಯಲ್ಲಿ ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಬಿಪಿನ್ ಗೋಪಾಲಕೃಷ್ಣ ಅವರು ಇಂದು ನಿವೃತ್ತಿ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. 

Share this Story:

Follow Webdunia kannada