ರೈತರಿಗಿಗ ಹೊಸದೊಂದು ಸಂಕಷ್ಟ

Webdunia
ಗುರುವಾರ, 25 ನವೆಂಬರ್ 2021 (18:01 IST)
ರಾಜ್ಯದಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ರೈತರು ತತ್ತರಿಸಿ ಹೋಗಿದ್ದಾರೆ. ಕಟಾವಿಗೆ ಬಂದಿದ್ದ ಬೆಳೆಯನ್ನು ಮಳೆ ನುಂಗಿ ಹಾಕಿದೆ. ಮಳೆ ಹಾನಿಯಾದ ಪ್ರದೇಶದ ಸಮಿಕ್ಷೆ ನಡೆಸಿ ತ್ವರಿತವಾಗಿ ಪರಿಹಾರ ನೀಡುವ ಭರವಸೆಯನ್ನು ಸರಕಾರ ನೀಡಿದೆ. ಆದರೆ ಸರ್ಕಾರದ ನೀತಿಗಳು ಇದೀಗ ರೈತರಿಗೆ ಪರಿಹಾರ ನೀಡಲು ತೊಡಕಾಗಿವೆ.ನಿಯಮಗಳ ಪ್ರಕಾರ, ಬೆಳೆ ಪರಿಹಾರವು ಕಟಾವು ಮಾಡಿದ ರೈತರಿಗೆ ದೊರೆಯುವುದಿಲ್ಲ. ಕಟಾವು ಮಾಡಿ ರಾಶಿ ಹಾಕಿದ ರೈತರಿಗೆ ಪರಿಹಾರ ನೀಡಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಲ್ಲಿ ಅವಕಾಶವಿಲ್ಲ. ಹೊಲದಲ್ಲಿಯೇ ಇರುವ ಬೆಳೆಗೆ ಮಾತ್ರ ಪರಿಹಾರ ನೀಡಲು ಅವಕಾಶವಿದೆ. ಇದರಿಂದಾಗಿ ರೈತರು ಸಂಕಷ್ಟ ಪಡುವಂತಾಗಿದೆ.
 
ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಹುತೇಕರು ಬೆಳೆಯನ್ನು ಕಟಾವು ಮಾಡಿ ಒಂದು ಕಡೆ ರಾಶಿ ಹಾಕಿದ್ದಾರೆ. ಕಟಾವು ಮಾಡಿ ರಾಶಿ ಮಾಡಲು ಅವಕಾಶ ಸಿಗದ ಕಾರಣ ಒಂದೆಡೆ ಗುಡ್ಡೆ ಹಾಕಿದ್ದಾರೆ. ಇಂತಹ ಬೆಳೆಯು ಈಗ ಮಳೆಯಿಂದಾಗಿ ಹಾಳಾಗಿದೆ. ಆದರೆ, ಇವುಗಳಿಗೆ ಪರಿಹಾರ ನೀಡಲು ಆವಕಾಶವಿಲ್ಲ. ಇದೇ ಕಾರಣಕ್ಕೆ ರೈತರು ದಿಕ್ಕು ತೋಚದಂತಾಗಿದ್ದಾರೆ.
 
ಮಳೆ ಹಾನಿ ಸಮಿಕ್ಷೆಯನ್ನು ಹೊಲದಲ್ಲಿದ್ದ ಬೆಳೆ ನಾಶವಾಗಿದ್ದರೆ ಮಾತ್ರ ಹಾನಿ ಎಂದು ಪರಿಗಣಿಸಲಾಗಿದೆ. ಆದರೆ ಈಗ ಹೊಲಗಳಿಗಿಂತ ಅಧಿಕ ಪ್ರಮಾಣದಲ್ಲಿ ರಾಶಿ ಮಾಡಿ ಹಾಕಿದ ಬೆಳೆ ನಾಶವಾಗಿದೆ. ಭತ್ತ ಹಾಗು ಮೆಕ್ಕೆಜೋಳವು ಮೊಳಕೆಯೊಡೆದಿದೆ. ಮೊಳಕೆಯೊಡೆದ ಧಾನ್ಯಕ್ಕೆ ಮಾರುಕಟ್ಟೆ ಇಲ್ಲ. ಇದರಿಂದಾಗಿ ರೈತರ ನೋವಿನ ಬೆಂಕಿಗೆ ತುಪ್ಪ ಸುರಿದಂತಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜಾತಿಗಣತಿಗೆ ವಿಕಲಚೇತನರ ಬಳಕೆ: ಬಿವೈ ವಿಜಯೇಂದ್ರ ಆಕ್ಷೇಪ

ಕೋಟ್ಯಂತರ ಜನರ ಜೀವನದಲ್ಲಿ ಬದಲಾವಣೆ ತಂದಿರುವ ಗ್ಯಾರಂಟಿ:ರಣದೀಪ ಸುರ್ಜೇವಾಲ

ಎಲ್ಲ ಭಾಗ್ಯಗಳನ್ನು ಹಿಂಪಡೆದು ಮೂರು ನಾಮ ಹಾಕಲು ಸಿದ್ಧತೆ: ಡಾ.ಅಶ್ವತ್ಥನಾರಾಯಣ್

ಮಕ್ಕಳ ಸರಣಿ ಸಾವಿನ ಹಿನ್ನಲೆ: ಕೋಲ್ಡ್ರಿಫ್ ಮಕ್ಕಳ ಸಿರಪ್ ಗೆ ಕರ್ನಾಟಕದಲ್ಲೂ ನಿಷೇಧ

ಜಾತಿ ಸಮೀಕ್ಷೆ ಪ್ರಶ್ನೆ ಕೇಳುವಾಗ ಡಿಕೆ ಶಿವಕುಮಾರ್ ಗರಂ: ಪ್ರಶ್ನೆ ತಯಾರಿಸಿದ್ದು ಯಾರು ಎಂದ ನೆಟ್ಟಿಗರು

ಮುಂದಿನ ಸುದ್ದಿ
Show comments