Select Your Language

Notifications

webdunia
webdunia
webdunia
webdunia

ನೂತನ ಡಿಜಿ & ಐಜಿಪಿ ನೇಮಕ ವಿಚಾರ: ನಾಳೆ ಸಿಎಂರಿಂದ ನಿರ್ಧಾರ ಪ್ರಕಟ

ನೂತನ ಡಿಜಿ & ಐಜಿಪಿ ನೇಮಕ ವಿಚಾರ: ನಾಳೆ ಸಿಎಂರಿಂದ ನಿರ್ಧಾರ ಪ್ರಕಟ
ಬೆಂಗಳೂರು , ಶುಕ್ರವಾರ, 27 ಫೆಬ್ರವರಿ 2015 (18:34 IST)
ರಾಜ್ಯ ಪೊಲೀಸ್ ಇಲಾಖೆಯ ಮಹಾ ನಿರ್ದೇಶಕ ಪದವಿ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಗೃಹಸಚಿವರ ನೇತೃತ್ವದಲ್ಲಿ ನಡೆದಿದ್ದ ಸಭೆ ಅಂತ್ಯಗೊಂಡಿದ್ದು, ಯಾವುದೇ ನಿರ್ಧಾರವನ್ನು ನಾವು ಮಾಡಿಲ್ಲ. ಆದರೆ ನಾಳೆ ನೂತನ ಮಹಾನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದರು. 
 
ಸಭೆಯ ಬಳಿಕ ಮಾತನಾಡಿದ ಸಚಿವರು, ಸಭೆ ನಡೆಸಲಾಗಿದೆಯಾದರೂ ಹುದ್ದೆಗೆ ಎಲ್ಲರೂ ಸಮಾನ ಅರ್ಹತೆ ಹೊಂದಿದ್ದಾರೆ.  ಆದರೆ ನಮಗೆ ನೇಮಕದಲ್ಲಿ ಗೊಂದಲ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ನೇಮಕ ಅಧಿಕಾರವನ್ನು ಸಿಎಂ ಅವರಿಗೆ ವಹಿಸಲಿದ್ದು, ನಾಳೆ ನೂತನ ಮಹಾ ನಿರ್ದೇಶಕರು ಅಧಿಕಾರ ಸ್ವೀಕರಿಸಲಿದ್ದಾರೆ ಎಂದರು. 
 
ಬಳಿಕ, ಮಹಾ ನಿರ್ದೇಶಕರ ನೇಮಕದಲ್ಲಿ ಮುಖ್ಯಮಂತ್ರಿಗಳು ಪರಮಾಧಿಕಾರವನ್ನು ಹೊಂದಿದ್ದು, ಮುಂದಿನ ಡಿಜಿ&ಐಜಿಪಿ ಯಾರಾಗಲಿದ್ದಾರೆ ಎಂಬ ಬಗ್ಗೆ ಸಿಎಂ ಸಿದ್ದರಾಮಯ್ಯನವರೇ ನಾಳೆ ಘೋಷಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಅರ್ಹರಾದ ನಾಲ್ವರೂ ಹಿರಿಯ ಅಧಿಕಾರಿಗಳ ಹೆಸರುಗಳನ್ನು ಮುಖ್ಯಮಂತ್ರಿಗಳಿಗೆ ಶಿಫಾರಸು ಮಾಡಿದ್ದೇವೆ.  
 
ಇನ್ನು ಹುದ್ದೆಗಾಗಿ ಹಿರಿಯ ಅಧಿಕಾರಿಗಳಾದ ಬಿಪಿನ್ ಗೋಪಾಲಕೃಷ್ಣ, ಸುಶಾಂತ್ ಮಹಾಪಾತ್ರ, ಓಂಪ್ರಕಾಶ್ ಹಾಗೂ ಆರ್.ಕೆ.ದತ್ತಾ ಅವರ ಹೆಸರುಗಳಿದ್ದು, ಆ ಪಟ್ಟಿಯನ್ನೂ ಕೂಡ ಈಗಾಗಲೇ ಮುಖ್ಯಮಂತ್ರಿಗಳಿಗೆ ರವಾನಿಸಿದ್ದೇವೆ. ಈ ಹಿನ್ನೆಲೆಯಲ್ಲಿ ವಿಷಯ ಸಂಬಂಧ ನಾಳೆ ಮುಖ್ಯಮಂತ್ರಿಗಳೇ ಖುದ್ದು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.  

Share this Story:

Follow Webdunia kannada