Daily Horoscope

DK Shivakumar: ಗೃಹಲಕ್ಷ್ಮಿ ಹಣ ಪ್ರತೀ ತಿಂಗಳು ಕೊಡ್ತೀವಿ ಅಂದಿಲ್ಲ ಎಂದ ಡಿಕೆಶಿ: ಪ್ರತೀ ತಿಂಗಳು ಅಂದ್ರೆ ಏನರ್ಥ

Krishnaveni K
ಮಂಗಳವಾರ, 20 ಮೇ 2025 (08:51 IST)
ಬೆಂಗಳೂರು: ಗೃಹಲಕ್ಷ್ಮಿ ಹಣವನ್ನು ತಿಂಗಳು-ತಿಂಗಳು ಹಾಕ್ತೀವಿ ಎಂದಿಲ್ಲ ಎಂದ ಡಿಸಿಎಂ ಡಿಕೆ ಶಿವಕುಮಾರ್ ಗೆ ಈಗ ನೆಟ್ಟಿಗರು ತಪರಾಕಿ ನೀಡಿದ್ದಾರೆ. ಹಾಗಿದ್ದರೆ ಪ್ರತೀ ತಿಂಗಳು ಎಂದರೆ ಏನು ಅರ್ಥ ಎಂದು ಕೇಳಿದ್ದಾರೆ.

ನಿನ್ನೆ ಸಾಧನಾ ಸಮಾವೇಶದ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ ಡಿಸಿಎಂ ಡಿಕೆ ಶಿವಕುಮಾರ್, ಮೂರು ತಿಂಗಳಿನಿಂದ ಗೃಹಲಕ್ಷ್ಮಿ ಹಣ ಜಮೆ ಆಗಿಲ್ಲ ಎಂಬ ಪತ್ರಿಕರ್ತರ ಪ್ರಶ್ನೆಗೆ ಉತ್ತರಿಸುವಾಗ, ತಿಂಗಳು ತಿಂಗಳು ಹಾಕ್ತೀವಿ ಎಂದು ನಾವು ಹೇಳಿಲ್ಲ. ಗುತ್ತಿಗೆದಾರರಿಗೂ ಕೆಲಸವಾದ ತಕ್ಷಣ ಹಣ ಬರುತ್ತಾ ಎಂದೆಲ್ಲಾ ನೆಪ ಹೇಳಿದ್ದರು.

ಅವರ ಹೇಳಿಕೆ ಈಗ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ. ಹಾಗಿದ್ದರೆ ಗೃಹಲಕ್ಷ್ಮಿ ಜಾಹೀರಾತಿನಲ್ಲಿ ಪ್ರತೀ ತಿಂಗಳು ಎಂದು ಹಾಕುವ ಉದ್ದೇಶವೇನು? ಹಾಗಂದರೆ ಅರ್ಥವೇನು ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

ಕೇವಲ ಅಧಿಕಾರಕ್ಕೆ ಬರಲು ಮಾತ್ರ ಗ್ಯಾರಂಟಿ ಯೋಜನೆ ಎನ್ನುವುದು ಈಗ ಸ್ಪಷ್ಟವಾಗಿದೆ ಎಂದಿದ್ದಾರೆ. ಗ್ಯಾರಂಟಿ ಯೋಜನೆಗೆ ಹಣವಿಲ್ಲ ಎಂದು ಒಪ್ಪಿಕೊಳ್ಳಿ, ಅದನ್ನು ಬಿಟ್ಟು ಮತದಾರರನ್ನು ಈ ರೀತಿ ಮೂರ್ಖರನ್ನಾಗಿಸಬೇಡಿ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇನ್ನೊಬ್ಬಳೊಂದಿಗೆ ಸಿಕ್ಕಿಬಿದ್ದ ಪ್ರಿಯಕರ: ಚಕಾರ ಎತ್ತಿದ ಪ್ರೇಯಸಿ ಮೇಲೆಯೇ ಕಾರು ಹರಿಸಿ ಪರಾರಿ Video

ಅಬ್ಬಾ ನಿಜಕ್ಕೂ ಭಯಾನಕ… ಎಕ್ಸ್ ಪ್ರೆಸ್ ರೈಲಿಗೆ ಅಡಿಗೆ ಸಿಲುಕಿದವು ಹತ್ತಾರು ಮೇಕೆಗಳು Video

ಒಂದೇ ಕಪ್ಪು ಚುಕ್ಕೆಯಿಲ್ಲದೇ ದೇಶ ಮುನ್ನಡೆಸುತ್ತಿದ್ದಾರೆ ಮೋದಿ ಜೀ: ವಿಜಯೇಂದ್ರ ಹೊಗಳಿಕೆ

ಗಣೇಶ ಪ್ರತಿಷ್ಠಾಪನೆ ಆಗುವ ಮುನ್ನ ಚಪ್ಪಲಿ ಹಾಕಿಕೊಂಡರೆ ತಪ್ಪಿಲ್ಲ: ಯದುವೀರ್ ಒಡೆಯರ್

ಸ್ನಾನಕ್ಕೆ ಹೋಗ್ತೀನಿ ಎಂದಿದ್ದ 23 ವರ್ಷದ ಯುವತಿ ಹಠಾತ್ ಸಾವು: ಹಾಸನದ ಲಾಡ್ಜ್ನಲ್ಲಿ ನಡೆದಿದ್ದೇನು

ಮುಂದಿನ ಸುದ್ದಿ
Show comments